Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

‘ರೈತ ಕವಿ’ ಲೆನಾರ್ಟ್ ಸ್ಯೋಗ್ರೆನ್ : ಎಸ್. ಜಯಶ್ರೀನಿವಾಸ ರಾವ್ ಸರಣಿ

ಈ ಕಾರ್ಯದ ವಿರೋಧಾಭಾಸದ ಸ್ವರೂಪವು ಅವರ ಕವಿತೆಗಳಿಗೆ ಒಂದು ರೀತಿಯ ಮೊಂಡುತನದ ನಿಷ್ಠುರತೆಯನ್ನು ನೀಡುತ್ತದೆ. ಮೌನದ ದಿಕ್ಕಿನಲ್ಲಿ ಮಾತನಾಡುವ ಈ ಮಾತು, ಭಾಷೆಯ ಮೂಲಕ ಭಾಷೆಯಿಲ್ಲದವರ ಜಗತ್ತನ್ನು ವ್ಯಾಖ್ಯಾನಿಸುವ ಈ ಪ್ರಯತ್ನ – ಅದರೊಂದಿಗೆ, ಯಾವಾಗಲೂ ಅಡಗಿರುವ ವೈಫಲ್ಯದ ಭಾವನೆಯ ಜೊತೆ – ಸ್ಯೋಗ್ರೆನ್ ಅವರು ಇದನ್ನು ಮುವ್ವತ್ತಕ್ಕೂ ಹೆಚ್ಚು ಕವನ ಸಂಕಲನಗಳಲ್ಲಿ ನಿರಂತರವಾಗಿ ಮತ್ತು ಸಮಚಿತ್ತದಿಂದ ನಿರ್ವಹಿಸುತ್ತಾ ಬಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಲೆನಾರ್ಟ್ ಸ್ಯೋಗ್ರೆನ್-ರವರ (Lennart Sjögren, 1930) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

Read More

ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುವ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ವರ್ತಮಾನದ ಕಾಲದೊಳಗೆ ಇಣುಕಿ ನೋಡುವ, ಜೀವನದ ಜಾಲದಲ್ಲಿ ತನ್ನ ಸ್ಥಾನವನ್ನು ನಿರ್ಧರಿಸಿಕೊಳ್ಳುವಂತಹ ತನ್ನ ಸರಳ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆತುರಪಡದೆ ಸಾವಕಾಶವಾಗಿ ಎಲ್ಲವನ್ನೂ ಹತ್ತಿರದಿಂದ ನೋಡುತ್ತಾರೆ, ವಸ್ತುಗಳು, ಪರಿಕಲ್ಪನೆಗಳು, ಘಟನೆಗಳನ್ನು ಸೂಕ್ಷ್ಮವಾಗಿ ಆಲಿಸುತ್ತಾರೆ ಮತ್ತು ಪ್ರತಿಯೊಂದೂ ತನ್ನ ಜ್ಞಾನವನ್ನು ತನಗೆ ಬಹಿರಂಗಪಡಿಸಲು ಅವಕಾಶ ಮಾಡಿಕೊಡುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಬಲ್ಗೇರಿಯಾ ದೇಶದ ಕವಿ ಎಕ್ಯಾಟರೀನಾ ಯೊಸಿಫೋವಾ-ರವರ
(Ekaterina Yosifova) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

“ಧೈರ್ಯಶಾಲಿ ಮತ್ತು ಬಂಡಾಯಗಾರ ಅರಬ್ ಕವಿ”: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅಡೋನೀಸ್ ಅವರ ಕಾವ್ಯ ಮತ್ತು ವಿಮರ್ಶೆ ಅರೇಬಿಕ್ ಕಾವ್ಯದ ಬೆಳವಣಿಗೆಯ ಮೇಲೆ ದೂರಗಾಮಿ ಪ್ರಭಾವ ಬೀರಿವೆ. ಶಾಸ್ತ್ರೀಯ ಕಾವ್ಯದಲ್ಲಿ ಆಳವಾಗಿ ಬೇರೂರಿದ್ದಾಗ್ಯೂ ಸಮಕಾಲೀನ ಅರೇಬಿಕ್ ಸಮಾಜದ ಅವಸ್ಥೆ ಮತ್ತು ಪ್ರತಿಕ್ರಿಯೆಗಳನ್ನು ತೋರಿಸುವಂತಹ ಹೊಸ ಕಾವ್ಯಾತ್ಮಕ ಭಾಷೆ ಮತ್ತು ಲಯಗಳನ್ನು ಸೃಷ್ಟಿಸಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸಿರಿಯಾ (Syria) ದೇಶದ ಅರೇಬಿಕ್ (Arabic) ಭಾಷಾ ಕವಿ ಅಡೋನೀಸ್-ರವರ (Adonis – Ali Ahmad Said Esber) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಕವಿ ಒಬ್ಬ ಎಂಜಿನಿಯರ್;‌ ಕವಿತೆ ಒಂದು ಯಂತ್ರ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಡಿ ಮೆಲೊ ನೆಟೊ ಅವರು ತಮ್ಮ ಕಾವ್ಯದಲ್ಲಿ ‘ವಸ್ತು’-ಗಳಿಗೆ ನೀಡುವ ವಿಶೇಷ ಸ್ಥಾನಮಾನವನ್ನು ಅವರ ಕಾವ್ಯದ ವಿಮರ್ಶಕರು ಗಮನಿಸಿದ್ದಾರೆ. ಡಿ ಮೆಲೊ ನೆಟೊ ಅವರ ಕಾವ್ಯದಲ್ಲಿ ಕಾಣುವ ಕಲ್ಲು, ಚಾಕು, ಗಾಳಿ, ನೀರು – ಇಂತಹ ‘ವಸ್ತು’-ಗಳು ಮತ್ತೆ ಮತ್ತೆ ಎಡೆಬಿಡದೆ ಬರುವ ಪ್ರತಿಮೆಗಳಾಗುತ್ತವೆ; ಜೊತೆಗೆ ಪ್ರಪಂಚದಾದ್ಯಂತದ ವಿಷಯಗಳು ಸಹ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಬ್ರೆಜಿಲ್ (Brazil) ದೇಶದ ಪೋರ್ಚುಗೀಸ್ (Portuguese) ಭಾಷಾ ಕವಿ ಜುವಾವ್ ಕೆಬ್ರಾಲ್ ಡಿ ಮೆಲೊ ನೇಟೊ-ರವರ (Joao Cabral De Melo Neto, 1920-1999) ಕಾವ್ಯದ ಕುರಿತ ಬರಹ

Read More

ನೈಸರ್ಗಿಕ ಜಗತ್ತಿಗೆ ಒಬ್ಬ ಅವಿಶ್ರಾಂತ ಮಾರ್ಗದರ್ಶಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ರೆಯ್ನಾಲ್ಡ್ಸ್ ಗಮನಿಸಿದಂತೆ, “ಈ ಸ್ವಯಂ ಪ್ರಜ್ಞೆಯು ಸಮೃದ್ಧವಾದ ಮತ್ತು ಸುಲಲಿತವಾದ ಸೇರ್ಪಡೆಯಾಗಿದೆ.” ಆಲಿವರ್‌-ರ ಕಾವ್ಯದಲ್ಲಿ ಕಂಡುಬರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ಮಯದ ವ್ಯಾಪಕ ಸ್ವರವಿದೆ. ಆಲಿವರ್ ಅವರ ಕಾವ್ಯ “ಕವಿ ವಿಲಿಯಮ್ ಬ್ಲೇಕ್-ನ ಕವಿದೃಷ್ಟಿಯ ದಿವ್ಯದರ್ಶನದ ಗುಣ” ಹೊಂದಿವೆ ಎಂದು ರೆಯ್ನಾಲ್ಡ್ಸ್ ಅರಿತರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಅಮೇರಿಕಾ ದೇಶದ ಕವಿ ಮೇರಿ ಆಲಿವರ್-ರವರ (Mary Oliver, 1935-2019) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ