Advertisement
ಶೇಷಾದ್ರಿ ಗಂಜೂರು

ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.

ಕಾಲದಲ್ಲಿ ಲೀನವಾಗುವುದೆಂದರೆ….: ಶೇಷಾದ್ರಿ ಗಂಜೂರು ಅಂಕಣ

“ಮ್ಯಾಕ್ಸ್‌ವೆಲ್‌ ನ ಕಾಲಕ್ಕೆ ಸುಮಾರು ಎರಡು ಶತಮಾನದ ಮುನ್ನವೇ, ಐಸಾಕ್ ನ್ಯೂಟನ್ “ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು” ಎಂದು ತೋರಿಸಿಕೊಟ್ಟಿದ್ದ. ಅದರ ಕುರಿತು ಮತ್ತಷ್ಟು ಅಧ್ಯಯನ ನಡೆಸಿದ ಮ್ಯಾಕ್ಸ್‌ವೆಲ್, ಕೇವಲ ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಿಂದಲೇ ಯಾವುದೇ ಬಣ್ಣವನ್ನು ನಿರ್ಮಿಸಬಹುದೆಂದು ತೋರಿಸಿಕೊಟ್ಟ. ಅಷ್ಟೇ ಅಲ್ಲ, ೧೮೬೧ರಲ್ಲಿ, ಲಂಡನ್ನಿನ ರಾಯಲ್ ಸೊಸೈಟಿಯ ಪ್ರದರ್ಶನ ಒಂದರಲ್ಲಿ..”

Read More

ಮಹಾನತೆಯ ಅಹಂಕಾರದ ಹುಂಬತನ: ಶೇಷಾದ್ರಿ ಗಂಜೂರು ಅಂಕಣ

“ಅದು, ನಾವು ಸಾಮಾನ್ಯವಾಗಿ ಕಾಣುವ ಆರಡಿ-ಮೂರಡಿಯ ಗೋರಿಯಲ್ಲ; ಅದು ಹಲವಾರು ಕೋಣೆಗಳಿರುವ ಕಟ್ಟಡ. ಒಂದು ಕೋಣೆಯಲ್ಲಿ, ಶವಪೆಟ್ಟಿಗೆ ಇದೆ. ಆ ಶವಪೆಟ್ಟಿಗೆ ಮರದಿಂದ ಮಾಡಿದ್ದಾದರೂ, ಅದಕ್ಕೆ ಚಿನ್ನದ ಹಾಳೆಗಳನ್ನು ಲೇಪಿಸಲಾಗಿದೆ. ಆ ಶವಪೆಟ್ಟಿಗೆಯನ್ನು ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ ಇದೆ. ಅದೂ ಸಹ, ಮೊದಲನೆಯ ಶವಪೆಟ್ಟಿಗೆಯಂತಹುದೇ. ಅದನ್ನೂ ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ!”

Read More

ನ್ಯೂರಾನ್‌ ಗಳ ಸುಳಿಯಲ್ಲಿ ನೆನಪಿನ ಕೊಂಡಿ…: ಶೇಷಾದ್ರಿ ಗಂಜೂರು ಅಂಕಣ

“ಈ ನ್ಯೂರಾನ್‌ ಗಳು ಒಂದಕ್ಕೊಂದು ಸಂಪರ್ಕಿಸುವ ಜಾಗಗಳಲ್ಲಿ, ಅವುಗಳು ತಾಗುವುದಿಲ್ಲ. ಬದಲಿಗೆ, ಅವುಗಳ ಮಧ್ಯೆ ಅತ್ಯಂತ ಸಣ್ಣದಾದ ಸಿನಾಪ್ಟಿಕ್ ಕ್ಲೆಫ್ಟ್‌ ಗಳೆನ್ನುವ ಜಾಗವಿರುತ್ತದೆ. ಎಲೆಕ್ಟ್ರಿಕ್ ಸಿಗ್ನಲ್‌ ಗಳು ಹಾಯದಂತಹ ಈ ಜಾಗಗಳಲ್ಲಿ, ಒಂದು ನ್ಯೂರಾನ್ ಇನ್ನೊಂದು ನ್ಯೂರಾನ್‌ ಗೆ ತನ್ನ ಸಂದೇಶ ರವಾನೆ ಮಾಡುವುದು. ರಾಸಾಯನಿಕ ಕಣಗಳ ಮೂಲಕ. “ನ್ಯೂರೋಟ್ರಾನ್ಸ್‌ಮಿಟರ್ಸ್” ಎನ್ನುವ ಈ ರಾಸಾಯನಿಕ ಕಣಗಳಲ್ಲಿ ಹಲವಾರು ತರಹದ ವೈವಿಧ್ಯಗಳಿದ್ದು, ..”

Read More

“ಮರೆವೇ ಮುಕ್ತಿ”: ಶೇಷಾದ್ರಿ ಗಂಜೂರು ಅಂಕಣ

“ಅವನ ಸರ್ಜರಿಯ ಕೆಲ ವರ್ಷಗಳ ನಂತರ ಅವನ ತಂದೆ ಮರಣ ಹೊಂದಿದರು. ಆ ವಿಷಯ ಅವನಿಗೆ ತಿಳಿದಾಗ ಎಲ್ಲರಂತೆಯೇ ಅವನು ದುಃಖಿತನಾದ. ಕೆಲವೇ ಸಮಯದಲ್ಲಿ ಮಾತುಕತೆ ಬೇರೆಡೆಗೆ ತಿರುಗಿತು; ಅವನಪ್ಪ ಸತ್ತಿದ್ದ ಸಂಗತಿ ಸಂಪೂರ್ಣವಾಗಿ ಮರೆಯಿತು. ಆ ಸಾವಿನ ನೋವು ಕ್ಷಣಮಾತ್ರದಲ್ಲಿ ಮರೆಯಾಯಿತು. ಕೆಲವು ಸಮಯದ ನಂತರ ಮತ್ತೊಮ್ಮೆ ತಂದೆಯ ಸಾವಿನ ವಿಚಾರವನ್ನು ಅವನಿಗೆ ತಿಳಿಸಿದಾಗ, ಅದೇ ಮೊದಲ ಬಾರಿಗೆ ತಂದೆಯ ಸಾವನ್ನು ತಿಳಿದಂತೆ ಅವನು ದುಃಖಿತನಾದ.”

Read More

ಮಾನವನ ಮಿದುಳು ಮತ್ತು ನಡವಳಿಕೆಗಳು: ಶೇಷಾದ್ರಿ ಗಂಜೂರು ಅಂಕಣ

“ಮಿದುಳಿನಲ್ಲಿನ ಜೀವಕೋಶಗಳನ್ನು ಮೈಕ್ರೋಸ್ಕೋಪ್ ಮೂಲಕ ಕಾಣಲು ಕೊಂಚ ಮಟ್ಟಿನ ಪೂರ್ವ ಸಿದ್ಧತೆಗಳು ಅವಶ್ಯಕ. ಇದನ್ನು ಪ್ರಪ್ರಥಮ ಬಾರಿಗೆ ತೋರಿಸಿ ಕೊಟ್ಟವನು, ಇಟಲಿಯ ವೈದ್ಯ ಮತ್ತು ಜೀವಶಾಸ್ತ್ರಜ್ಞ ಕೆಮಿಲ್ಲೋ ಗೋಲ್ಗಿ. ಮಿದುಳನ್ನು ತೆಳು-ಪದರವಾಗಿ ಕತ್ತರಿಸಿ, ಅದನ್ನು ಮೈಕ್ರೋಸ್ಕೋಪ್‌ ನಲ್ಲಿ ಇಡುವ ಮುನ್ನ, ಆ ಪದರಕ್ಕೆ ಬೆಳ್ಳಿಯ ರಾಸಾಯನಿಕ ಮಿಶ್ರಣವನ್ನು ಸೇರಿಸಿದರೆ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ