Advertisement
ಸುಮಾವೀಣಾ

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, 'ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.

ಮಡಿಕೇರಿ ಮೇಲ್ ಮಂಜು: ಸುಮಾವೀಣಾ ಸರಣಿ

ಮಳೆಗಾಲದಲ್ಲಿ ದಟ್ಟ ಮಂಜು ಆವರಿಸಿಬಿಟ್ಟರೆ ಐದಾರು ಮೀಟರುಗಳು ಸ್ಪಷ್ಟವಾಗಿ ಕಂಡರೆ ಹೆಚ್ಚು. ಉಳಿದಂತೆ ಮಂಜನ್ನೆ ಸೀಳಿಕೊಂಡು ಹೋಗಬೇಕಾಗಿರುತ್ತಿತ್ತು ಆಗ ಒಂಥರಾ ಥ್ರಿಲ್ ಆಗಿರುತ್ತಿತ್ತು. ವಾಹನ ಅಪಘಾತಗಳು ಸಂಭವಿಸುತ್ತಿದ್ದವು. ಮಳೆ ಜೋರಾಗಿ ಬಂದರೆ ಮಂಜು ಎಲ್ಲಿ ಹೋಗುತ್ತಿತ್ತೋ? ಬಹುಶಃ ಮಳೆಯ ರಭಸಕ್ಕೆ ಎಲ್ಲಿಯಾದರೂ ಅಡಗುತ್ತಿತ್ತೋ ತಿಳಿಯದು ರಣ ಮಳೆ ಚಚ್ಚಿ ಹೋದನಂತೆ ಯಾವುದೋ ಬಿಲದಿಂದ ಮೆಲ್ಲನೆ ಆಚೆ ಬಂದು ತಾಯಿ ಮಗುವನ್ನು ತಬ್ಬುವಂತೆ ಇಡೀ ಮಡಿಕೇರಿ ನಗರವನ್ನು ತಬ್ಬಿಬಿಡುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ

Read More

ವಿಭಿನ್ನ ಜಗತ್ತು: ಸುಮಾವೀಣಾ ಸರಣಿ

ಇದಕ್ಕೆ ವ್ಯತಿರಿಕ್ತ ಎನ್ನುವಂತೆ ವಕೀಲರು ಹಾಗು ಜನನಾಯಕರಾಗಿದ್ದ ವ್ಯಕ್ತಿಯೊಬ್ಬರು ತಾವು ಕಾರಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಯಾರಾದರೂ ಮಳೆಯಲ್ಲಿ ಚಂಡಿಯಾಗಿ ಹೋಗುತ್ತಿದ್ದರೆ ಕಾರ್ ನಿಲ್ಲಿಸಿ ಅವರನ್ನು ಪರಿಚಯಿಸಿಕೊಂಡು ಅವರ ಮನೆವರೆಗೂ ಬಿಡುತಿದ್ದರು. ಇದಲ್ಲವೆ ನಿಜವಾದ ಮಾದರಿ ವ್ಯಕ್ತಿತ್ವ. ಇನ್ನೂ ಖೇದಕರವಾದ ಸಂಗತಿಯೆಂದರೆ ಬೇರೆ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ನಾಯಿಯೊಂದು ಅಲ್ಲಲ್ಲಿ ಅಡ್ಡಾಡುತ್ತಿತ್ತು ಎನ್ನುವ ಕಾರಣಕ್ಕೆ ಬಿಸಿ ಗಂಜಿಯನ್ನು ಅದರ ಮೇಲೆ ಎರಚಿದವರೂ ಇದ್ದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಕೊಡೆ…. ಕೊಡೆ … ಎಲ್ನೋಡಿ ಕೊಡೆ: ಸುಮಾವೀಣಾ ಸರಣಿ

ಆಗಷ್ಟೆ ಒಗೆದು ಹಿಂಡಿದ ಬಟ್ಟೆ ಹಾಕಿದರೆ ನೀರಿನ ಅಂಶ ಹಬೆಯಾಗಿ ಸುರುಳಿ ಸುರುಳಿಯಾಗಿ ಹೋಗುವುದನ್ನು ಕುತೂಹಲದಿಂದ ನೋಡುತ್ತಿದ್ದೆವು. ಕೆಲವೊಮ್ಮೆ ಶಾಖ ಹೆಚ್ಚಾಗಿ ಬಟ್ಟೆಯ ಒಂದು ಬದಿ ತುಕ್ಕುಹಿಡಿದ ಕೇಸರಿ ಬಣ್ಣಕ್ಕೆ ತಿರುಗುತ್ತಿದ್ದವು ….. ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಬಟ್ಟೆಯನ್ನು ಜೋಪಾನವಾಗಿ ಒಣಗಿಸಿ ತೆಗೆದಿಡುವುದೆ ಹೆಚ್ಚಿನ ಕೆಲಸವಾಗಿರುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ

Read More

ಬೇಲೂರು ದೇವಾಲಯದ ಮದನಿಕೆಯರ ಲೋಕ: ಸುಮಾವೀಣಾ ಸರಣಿ

ದೇವಾಲಯದ ನವರಂಗದ ಕಂಬಗಳ ಮೇಲೆ ಇರುವ ನಾಲ್ಕು ಮದನಿಕೆಯರಲ್ಲಿ ಆಗ್ನೇಯ ಕಂಬದವಳೇ ಶುಖಸಖಿ. ಎಡತೋಳ ಮೇಲೆ ಕೂಳಿತಗಿಳಿ ಅವಳ ಕಂಠೀಹಾರವನ್ನು ಹಿಡಿದಿದೆ. ಹಣ್ಣೊಂದರ ಆಸೆ ತೋರಿಸಿ ತನ್ನಾಭರಣ ಬಿಡಿಸಿಕೊಳ್ಳುತ್ತಿರುವ ಈಕೆಯ ಸೊಗಸು ಕೇಳಬಾರದು ನೋಡಲೇಬೇಕು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಮಡಿಕೇರಿ ಟು ಬೇಲೂರು: ಸುಮಾವೀಣಾ ಸರಣಿ

ರಿಸಲ್ಟ್ ಮುಗಿದ ನಂತರ ಒಂದು ದಿನವೂ ಮಡಿಕೇರಿಯಲ್ಲಿ ಇರುತ್ತಿರಲಿಲ್ಲ. ಅಷ್ಟರಲ್ಲಿ ಬೇಲೂರಿನ ರಥೋತ್ಸವದ ಸಂದರ್ಭ ಸಂಭ್ರಮ ಎರಡೂ ಆಗಿರುತ್ತಿದ್ದ ಕಾರಣ ಬೇಲೂರಿಗೆ ಹೋಗುತ್ತಿದ್ದೆವು. ಹೋದ ನಂತರ ನಾವು ಯಾರ ಅಣತಿಯನ್ನೂ ಒಪ್ಪುತ್ತಿರಲಿಲ್ಲ. ಪೇರೋಲ್‌ನಿಂದ ಆಚೆ ಬಂದ ಖೈದಿಗಳಂತೆ ಆಡುತ್ತಿದ್ದೆವು. ಬೇಲೂರು ದೇವಸ್ಥಾನದಲ್ಲಿ ಘಂಟೆ ಬಾರಿಸಿದರೆ ನಮ್ಮಜ್ಜಿ ಮನೆಗೆ ಕೇಳಿಸುತ್ತಿತ್ತು. ಮಹಾಮಂಗಳಾರತಿ ಘಂಟೆ, ನೈವೇದ್ಯದ ಘಂಟೆಗಳು ಒಂದು ನಮೂನೆ ಅಲರಾಂ ಇದ್ದಂತೆ. ಬೇಸಗೆ ಎಂದರೆ ಎಲ್ಲ ಕಡೆ ನೀರಿಗೆ ತೊಂದರೆಯಿರುವಂತೆ ಬೇಲೂರಿನಲ್ಲಿಯೂ ಇತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ