Advertisement
ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

“ಹಾಗೆ ಹೇಳಿಬಿಟ್ಟರೆ ನಿನ್ನನ್ನೇ ನಂಬಿಕೊಂಡ ನನ್ನ ಗತಿ ಏನು? ನಿನಗೆ ಗೊತ್ತಿರಲಿ, ನಿನ್ನೆ ಹೋಟೆಲ್‌ನಲ್ಲಿ ನಡೆದದ್ದೆಲ್ಲ ವೀಡಿಯೋ ರೆಕಾರ್ಡ್ ಆಗಿದೆ. ಅದು ನನ್ನ ಮೊಬೈಲ್‌ನಲ್ಲೇ ಇದೆ. ನೀನೀಗ ನನ್ನ ಮಾತಿಗೆ ಒಪ್ಪದಿದ್ದರೆ ನಾನೇನು ಮಾಡಬಹುದು, ಅದು ನಿನಗೂ ಗೊತ್ತಿದೆ……”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕತೆ “ವಾಟ್ಸಾಪ್ ಚಾಟ್” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಬದುಕೆಂಬ ಸರಳ ಗಣಿತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

ಬದುಕೆಂದರೆ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಸುಲಭವಾಗಿ ಸಾಗುವ ಸರಳರೇಖೆಯಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಬದುಕಿನಲ್ಲಿ ಸಂತಸದ ಕ್ಷಣ ಬರುತ್ತದೆ. ಅತ್ಯಂತ ದುಃಖದ ಗಳಿಗೆಯೂ ಬರುತ್ತದೆ. ಅತ್ಯುತ್ಕರ್ಷದ ಬೆನ್ನಿಗೇ ಮಹಾಪತನವೂ ಸಂಭವಿಸುತ್ತದೆ. ಬದುಕಿನಲ್ಲಿ ಏರಿಳಿತ ಎನ್ನುವುದು ಅತ್ಯಂತ ಸಹಜವಾದ ವಿದ್ಯಮಾನ. ಇಂತಹ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಬರುವುದು ಪ್ರಾಥಮಿಕ ಶಾಲೆಯಲ್ಲಿ ಕುಳಿತು ಕಲಿತ ಸರಳ ಗಣಿತ.
ಬದುಕಿನ ಲೆಕ್ಕಾಚಾರದ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

Read More

ವರ್ಷ ಸಂಧ್ಯಾಕಾಲೇ ಚಹಾ ಸೇವನಂ ಸ್ವರ್ಗಾರೋಹಣ ಸಮಾನಂ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

ಆಗತಾನೇ ನಾನು ಬರೆದಿದ್ದ ‘ಮ್ಯಾಚು’ ಎನ್ನುವ ಕಥೆಯನ್ನು ಅದೊಂದು ಸಂಜೆ ಚಹಾ ಕುಡಿಯುತ್ತಿದ್ದಾಗ ಅವನಿಗೆ ಓದಲು ಕೊಟ್ಟಿದ್ದೆ. ಎರಡು ದಿನ ಬಿಟ್ಟು ಅದನ್ನು ಓದಿ ಬಂದವನು ವಿಪರೀತ ಮೆಚ್ಚುಗೆಯಾಗಿದ್ದಾಗಿ ಹೇಳಿ, ಕಣ್ಣೀರು ಸುರಿಸಿದ್ದ. ಆ ಕಥೆಯಲ್ಲಿ ಭಿನ್ನ ಧರ್ಮಕ್ಕೆ ಸೇರಿದವರ ಗೆಳೆತನದ ಬಗೆಗಿನ ಚಿತ್ರಣವಿತ್ತು.
ಚಹಾದ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಅಜ್ಜಿಗಂತೂ ಕೌದಿಯ ಧ್ಯಾನ
ಸುತ್ತಮುತ್ತ ಹರಡಿಕೊಂಡ
ತುಂಡು ತುಂಡು ಬಟ್ಟೆಗಳು
ಹರಿದು ಚೆಲ್ಲಾಪಿಲ್ಲಿಯಾದ ಬಟ್ಟೆ
ಚೂರು ಚೂರುಗಳಲ್ಲಿ
ಮಗ ಮಗಳು ಮೊಮ್ಮಕ್ಕಳ
ಮಮಕಾರದ ಸಮಗ್ರತೆ
ಹರಿದ ಬಟ್ಟೆಯ ಬಾಲ್ಯ
ತಡಕಾಡಲ್ಪಡುತ್ತದೆ ಒದ್ದೆಗಣ್ಣಿನಲಿ”- ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ಸಂಶೋಧನೆ, ಸಾಹಿತ್ಯ ಜಗತ್ತು ಮತ್ತು ನಾನು: ಡಾ| ವಿಶ್ವನಾಥ ಎನ್ ನೇರಳಕಟ್ಟೆ

ಸಂಶೋಧನೆಯಲ್ಲಿ ತೊಡಗಿಸಿಕೊಂಡ ನಾನೀಗ ಎಲ್ಲವನ್ನೂ ಪ್ರಶ್ನಿಸುವ, ಕುತೂಹಲದಿಂದ ನೋಡುವ ಶಿಶುವಾಗಿ ಬದಲಾಗಿದ್ದೆ. ಪ್ರಾಯೋಗಿಕ ದೃಷ್ಟಿ ನನ್ನಲ್ಲಿ ಮೊಳಕೆಯೊಡೆಯಲಾರಂಭಿಸಿತ್ತು. ವೈಚಾರಿಕ ಪ್ರಜ್ಞೆ ಜಾಗೃತವಾಗಿತ್ತು. ಈ ಬಗೆಯ ಮನೋಧರ್ಮ ಸಂಶೋಧನಾ ಪ್ರಕ್ರಿಯೆಯ ನೆಲೆಯಲ್ಲಿ ಪ್ರಯೋಜನಕಾರಿಯಾಗಿತ್ತು. ಆದರೆ ಅನುದಿನದ ಬದುಕಿನಲ್ಲಿಯೂ ಇದು ಅನುರಣನವಾಗತೊಡಗಿದಾಗ ಒಂದಷ್ಟು ತೊಂದರೆ ಎದುರಾದದ್ದಂತೂ ಸತ್ಯ.
ಡಾ| ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ