Advertisement

Category: ದಿನದ ಪುಸ್ತಕ

ರಾಜು ಸನದಿ ಪುಸ್ತಕದ ಕುರಿತು ಆಶಾ ಜಗದೀಶ್ ಲೇಖನ

“ಧಾರ್ಮಿಕ ಕಟ್ಟುಪಾಡುಗಳು ಹೇಗೆಲ್ಲ ಹೆಣ್ಣನ್ನು, ಬಲಹೀನರನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸುತ್ತದೆ ಎನ್ನುವುದನ್ನು ರಾಜುರವರ ಕವಿತೆಗಳು ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಹೇಳುತ್ತಾ ಹೋಗುತ್ತವೆ. ತನ್ನ ಸುತ್ತಮುತ್ತಲ ಸಂವೇದನೆಗಳಿಗೆ ಕವಿಯಾದವನು ಹೇಗೆ ಪ್ರತಿಸ್ಪಂದಿಸುತ್ತಾನೆ ಎಂಬುದು ಬಹಳ ಗಮನದಲ್ಲಿಟ್ಟುಕೊಳ್ಳಬೇಕಾದದ್ದು. ಕಾರಣ ಕವಿ ತನ್ನ ಒಳಗಿನ ಪ್ರಪಚಂದಲ್ಲಿ ಕಣ್ಣು ತೆರೆದುಕೊಂಡ ಸಮಯದಲ್ಲಿಯೇ ಹೊರಗಿನ ಪ್ರಪಂಚಕ್ಕೂ…”

Read More

ಶೋಭಾ ಹಿರೇಕೈ ಕಂಡ್ರಾಜಿ ಕವನ ಸಂಕಲನಕ್ಕೆ ವಿಷ್ಣು ನಾಯ್ಕರು ಬರೆದ ಮುನ್ನುಡಿ

“ಇಲ್ಲಿ. ನಾವು ಕೆಲವು ದುಡಿಮೆಯ ವರ್ಗವನ್ನು ಹಂಗುಹರಕೊಂಡವರಂತೆ ದುಡಿಸಿಕೊಳ್ಳುತ್ತೇವೆ. ಆ ಕಾರಣಕ್ಕಾಗಿ ಅವರಿಗೆ ಕೂಲಿ ಕೊಡುತ್ತೇವಲ್ಲ ಅಂದುಕೊಳ್ಳಬಹುದು. ನಿಜ, ಕೊಡುತ್ತೇವೆ. ಆದರೆ ಆ ಕಾರಣಕ್ಕಾಗಿ ಅವರ ದೇಹ ನುಗ್ಗಾಗುವುದೆಂಬ ಅಳತೆಯ ಅರಿವಿಲ್ಲ ನಮಗೆ. ಅವರ ಬೆವರಿಗೆ ನಾವು ಕಟ್ಟಿದ ಬೆಲೆ ಸಾಲದು. ಅವರು ಕಳಕೊಂಡ ದೇಹದ ತೂಕದ ಅರಿವಿಲ್ಲ ನಮಗೆ. ಅವರು ನಮಗಾಗಿ ನಿದ್ದೆಯನ್ನೂ ಮಾರುತ್ತಾರೆಂಬ ಅಂದಾಜಿಲ್ಲ ನಮಗೆ.”

Read More

ದಿಲೀಪ್ ಕುಮಾರ್ ಪುಸ್ತಕಕ್ಕೆ ಮೂಡ್ನಾಕೂಡು ಚಿನ್ನಸ್ವಾಮಿಯವರ ಮಾತುಗಳು

“ಅವನು ಚಳಿ ಕಾಯಿಸಿಕೊಳ್ಳಲು ಬೆಂಕಿಯ ಮುಂದೆ ಕೂತಿದ್ದಾನೆ. ಸುಮ್ಮನೆ ಕುಳಿತಿಲ್ಲ; ಎದೆಯೊಳಗೆ ಬೆಂಕಿ ಇಟ್ಟುಕೊಂಡು ಕಾಯುತ್ತಿದ್ದಾನೆ. ಆ ಕಾಯುವಿಕೆಯ ತೀಕ್ಷ್ಣತೆಯನ್ನು ‘ಬೆಂಕಿ ಹೊರಗಿಲ್ಲ’ ಎಂಬ ಮಾತು ಮಿಂಚಿನಂತೆ ಹೊಳೆಯಿಸುತ್ತದೆ. ಉತ್ತಮ ಕಾವ್ಯ ಮಾಡುವ ಕೆಲಸ ಇಷ್ಟೆ. ಶಬ್ದವಿದೆ, ಅದಕ್ಕೊಂದು ಅರ್ಥವಿದೆ. ಅದರಿಂದಾಚೆ ಆ ಶಬ್ದಾರ್ಥಗಳು ಇನ್ನೇನಿನ್ನೇನನ್ನೋ ಧ್ವನಿಸುತ್ತವೆ. ಅದು ಕಾವ್ಯ. ಪ್ಯಾಬ್ಲೊ ನೆರೂಡ ಹೇಳುತ್ತಾನೆ.”

Read More

ನಟರಾಜ್ ಹುಳಿಯಾರರ ಪುಸ್ತಕದ ಕುರಿತು ಎಚ್.ಆರ್. ರಮೇಶ್ ಬರಹ

“ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು.”

Read More

ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಕಾದಂಬರಿಯ ಒಂದು ಭಾಗ

“ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ.”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ