Advertisement

Category: ದಿನದ ಪುಸ್ತಕ

ನಿರೂಪಣೆಯ ಹೊಸತನವನ್ನು ಮೆರೆಯುವ ‘ಫೀ ಫೋ’

ಸಮಕಾಲೀನತೆಯ ಬಿಕ್ಕಟ್ಟುಗಳಿಗೆ ಯುವ ತಲೆಮಾರು ತಮ್ಮನ್ನು ತಾವು ಒಡ್ಡಿಕೊಳ್ಳುತ್ತ ಮುಂದೆ ಸಾಗಿರುವುದರಿಂದ ಹೊಸತಲೆಮಾರಿನ ಕತೆಗಾರರ ಜೀವನಾನುಭವದ ಸ್ವರೂಪ ಈಗ ಬೇರೆಯಾಗಿದೆ. ಅದಕ್ಕೆ ಇವರು ಇಲ್ಲಿ ಪುಸ್ತಕಕ್ಕೆ ಬಳಸಿದ ಶಿರೋನಾಮೆ ‘ಫೀಫೋ’ನೂ ಒಂದು ಸಣ್ಣ ಸಾಕ್ಷಿ. ಫೀಫೋ ಇದು ಕಂಪ್ಯೂಟರಿನ ಭಾಷೆ, ಫಸ್ಟ್ ಇನ್ ಫಸ್ಟ್ ಔಟ್. ನಮ್ಮ ನೆನಪುಗಳು ಮತ್ತು ಅನುಭವಗಳು ಸ್ಮೃತಿ ಪಟಲದಲ್ಲಿ ಸರತಿ ಸಾಲಿನಲ್ಲಿ ನಿಂತಿರುತ್ತವೆ, ಮೊದಲು ನಿಂತದ್ದು ಮೊದಲು ಹೊರಬರಲೇ ಬೇಕು.
ಮಧುಸೂದನ್ ವೈ.ಎನ್.‌ ಬರೆದ ‘ಫಿಫೋ’ ಕಥಾಸಂಕಲನದ ಕುರಿತು ಸುನಂದಾ ಪ್ರಕಾಶ್ ಕಡಮೆ ಬರೆದ ಬರಹ ಇಲ್ಲಿದೆ

Read More

ಜ ನಾ ತೇಜಶ್ರೀ ಪುಸ್ತಕದ ಕುರಿತು ನೂತನ ದೋಶೆಟ್ಟಿ ಬರಹ

ಸೃಷ್ಟಿ ಸ್ಥಿತಿ ಲಯ – ಕವಿತೆಯನ್ನು ಈ ಮೇಲಿನ ಗಿಳಿಮರ ಕವಿತೆಯ ಇನ್ನೊಂದು ಭಾಗವಾಗಿಯೂ ಓದಬಹುದು. ಆದರೂ ಇದರ ಅರ್ಥ ಹೊಳಹು ಬೇರೆಯೇ. ಇಲ್ಲಿನ ಹಕ್ಕಿದಂಡು, ಕಪ್ಪೆ, ಈಚಲು ಮರಗಳೆಲ್ಲ ಒಂದೊಂದೂ ಒಂದು ಜಗವೇ ಆಗಿಯೂ, ಒಂದೇ ಜಗವಾಗಿಯೂ ಕಂಡು ಬೆರಗಾಗುವ ಕವಿ ಮನಸ್ಸು ತುಂಬಿ ಉಮ್ಮಳಿಸುತ್ತದೆ. ಆ ಕಣ್ಣೀರಲ್ಲಿ ಆನಂದ ತುಳುಕಿದರೂ, ಲೋಕದ ಡೊಂಕ ನೆನೆದು ಕಳವಳಿಸುತ್ತದೆ. ಮರವನ್ನು ಶಿವನಾಗಿಸಿದ್ದು ಕವಿಗೇ ಅಚ್ಚರಿಯಾಗಿ ಶಿವಶಿವಾ… ಎಂದು ಉದ್ಗರಿಸಿದ್ದಾರೆ.
ಯಕ್ಷಿಣಿ ಕನ್ನಡಿ ಕವಯತ್ರಿ ಜ.ನಾ. ತೇಜಶ್ರೀ ಬರೆದ ‘ಯಕ್ಷಿಣಿ ಕನ್ನಡಿ’ ಕವನ ಸಂಕಲನದ ಕುರಿತು ನೂತನ ದೋಶೆಟ್ಟಿ ಬರಹ

Read More

“ಜೀವ ಕೊಡಲೇ? ಚಹ ಕುಡಿಯಲೇ?” ಕಾದಂಬರಿಯ ಒಂದು ಅಧ್ಯಾಯ

ಒಂದು ನಂಬರಿನ ಸೋಮಾರಿ. ಇವಳು ಸ್ವಲ್ಪ ಕೈಕಾಲುಗಳನ್ನ ಅಲುಗಾಡಿಸಿಕೊಂಡಿರಲಿ ಎಂದು ಡ್ಯಾಡಿ ಕೆಲಸದವರನ್ನು ಇಟ್ಟುಕೊಂಡಿರಲಿಲ್ಲ. ಆದರೆ ಮಾಡಿಟ್ಟದ್ದನ್ನುಣ್ಣುವ ಇವಳ ಗೀಳು ಬಿಡದು. ಅನ್ನ ಮತ್ತು ಮೀನುಸಾರು ಹೇಗೇಗೋ ಮಾಡಿಟ್ಟಿರುತ್ತಾಳೆ. ಅಡುಗೆಮನೆಯಲ್ಲಿ ಕೆಲಸ ಮಾಡುವಾಗಲೂ ಲಕ್ಷ್ಯ ಹೊರಗಿನ ಟೀವಿಯ ಮೇಲೆಯೇ. ಅಮ್ಮನ ಅಡುಗೆಗೆ ಅಸಹ್ಯಪಟ್ಟ ಡ್ಯಾಡಿ ದಿನವೂ ಹೊರಗೇ ಊಟ ಮಾಡುತ್ತಿರಬೇಕೆನ್ನುವ ಸಂದೇಹ ನನಗೆ.
ಇತ್ತೀಚೆಗಷ್ಟೇ ಜ್ಞಾನಪೀಠ ಪ್ರಶಸ್ತಿ ಪಡೆದ ಕೊಂಕಣಿ ಸಾಹಿತಿ ದಾಮೋದರ ಮಾವಜೋ ಅವರ “ಜೀವ ಕೊಡಲೇ? ಚಹ ಕುಡಿಯಲೇ” ಕಾದಂಬರಿಯನ್ನು ಕಿಶೂ ಬಾರ್ಕೂರು ಕನ್ನಡಕ್ಕೆ ತಂದಿದ್ದು ಅದರ ಒಂದು ಭಾಗ ನಿಮ್ಮ ಓದಿಗೆ

Read More

ನಾಡಿಗೆ ಬೆಳಕು ಬರುತ್ತದಂತೆ…!

‘ಈಗ ಈ ಊರು ಶರಾವತಿ ನದಿಯ ನಡುವೆ ಅಲ್ಲಲ್ಲಿ ಇರುವ ಗುಡ್ಡವೊಂದರ ಮೇಲೆ ನಿರುಮ್ಮಳವಾಗಿ ಕೂತ ಪುಟ್ಟದೊಂದು ದ್ವೀಪದಂತೆ ಕಾಣುತ್ತದೆ. ಈಗ ಅಂದರೆ ಲಿಂಗನಮಕ್ಕಿ ಡ್ಯಾಮ್ ಆಗಿ ಶರಾವತಿ ನದಿಗೆ ಅಣೆಕಟ್ಟು ಕಟ್ಟಿದ ಮೇಲೆ ಜಲದ ರಾಶಿಯೇ ಒಂದೆಡೆ ನಿಂತಂತೆ ಭಾಸವಾಗುತ್ತದೆ. ಆದರೆ ಆಗ ಹಾಗಿರಲಿಲ್ಲ. ಶರಾವತಿ ಇಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದಳು. ಅದರ ಸುತ್ತ ಕಾಡು, ಎದುರಿಗೆ ತೋಟ, ಅಂತಹ ಒಂದು ಸುಂದರ ಪ್ರದೇಶವದು. ಎಲ್ಲಿಗೇ ಹೋಗುವುದಿದ್ದರೂ ಒಂದೆರಡು ಮೈಲು ದೂರ ನಡೆದೇ ಹೋಗಬೇಕು’ – ವಿದ್ಯುತ್ ಹುಟ್ಟುವ ಮುನ್ನ ಶರಾವತಿ ನದಿ ದಂಡೆ ಹೇಗಿತ್ತು ಎಂಬುದನ್ನು ‘ಹರಿವ ನದಿ’ ಆತ್ಮಕತೆ ನಿರೂಪಿಸುತ್ತದೆ. ಭಾರತಿ ಹೆಗಡೆ ನಿರೂಪಿಸಿದ ಮೀನಾಕ್ಷಿ ಭಟ್ಟರ ಈ ಆತ್ಮಕತೆ ನಾಳೆ ಸಿದ್ಧಾಪುರದಲ್ಲಿ ಬಿಡುಗಡೆಯಾಗಲಿದ್ದು, ಈ ನಾಡು ವಿದ್ಯುತ್ ಲೋಕಕ್ಕೆ ತೆರೆದುಕೊಂಡ ಪಲ್ಲಟಗಳ ವಿವರವಾದ ನಿರೂಪಣೆಯಿದೆ. ಪುಸ್ತಕದ ಮತ್ತೊಂದು ಅಧ್ಯಾಯ ಇಲ್ಲಿದೆ. 

Read More

ಮರ್ಥರ್ ಟಿಡ್ ಫಿಲ್‌ನ ‘ಮನೆ’

ಚಿಕ್ಕಮ್ಮನ ಮನೆ ತಲುಪಿದ ಕೂಡಲೇ ನನಗೊಂದು ಮಹತ್ವದ ಸನ್ನಿವೇಶ ಎದುರಾಯಿತು. ಹತ್ತು ದಿನಗಳ ಹಿಂದಷ್ಟೆ ತೆರೆದ ಹೃದಯ ಚಿಕಿತ್ಸೆ ಮಾಡಿಸಿಕೊಂಡಿದ್ದ ಮೇಘರಾಜ ಚಿಕ್ಕಪ್ಪ ಹೆಚ್ಚಿನ ಪಕ್ಷ ಹಾಸಿಗೆ ಬಿಟ್ಟು ಮೇಲೆದ್ದಿರಲಾರರು ಎಂದು ಎಣಿಸಿಕೊಂಡಿದ್ದೆ. ಆದರೆ, ಮನೆಯ ಮುಂದೆ ನಮ್ಮ ಕಾರು ನಿಂತು ಕಾಲಿಂಗ್ ಬೆಲ್ ಒತ್ತುವ ಮೊದಲು ಅವರು ಬಂದು ಬಾಗಿಲು ತೆರೆದಾಗ ನನ್ನೆಣಿಕೆಯಲ್ಲ ಸುಳ್ಳಾಗಿ ಹೋಯಿತು.  ಲವಲವಿಕೆಯಿಂದ ಪುಟಿಯುತ್ತಿದ್ದ ಅವರಿಗೆ ತೆರೆದ ಹೃದಯ ಚಿಕಿತ್ಸೆ ಆಗಿದೆ ಎಂದು ಮೇಲ್ನೋಟಕ್ಕೆ ಹೇಳುವ ಸಾಧ್ಯತೆ ಇರಲಿಲ್ಲ. ಇಂಥ ಅನೇಕ ಅಚ್ಚರಿಗಳು ಒಂದಾದಮೇಲೊಂದರಂತೆ ಎದುರಾಗುತ್ತ, ನನಗೆ ‘ಯುಕೆ’ ಪರಿಚಯವಾಗತೊಡಗಿತು.
ಸತೀಶ್ ಚಪ್ಪರಿಕೆ ಬರೆದ ಥೇಮ್ಸ್ ತಟದ ತವಕ ತಲ್ಲಣ ಕೃತಿಯು ಮರುಮುದ್ರಣಗೊಂಡಿದ್ದು, ಅದರ ಒಂದು ಅಧ್ಯಾಯ ಇಲ್ಲಿದೆ. 

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ