Advertisement

Category: ದಿನದ ಪುಸ್ತಕ

ಪೂರ್ವಕ್ಕೆ ಒಂದು ಅಪೂರ್ವ ಪಯಣ

ನಿಡಿತವಾದ ಕತೆಯ ಹಂದರವಿರುವ ಈ ಕೃತಿಯು ಒಂದು ತಾತ್ವಿಕ ಪ್ರಬಂಧದ ಹಾಗೆಯೆ ಇದೆ. ಅದು ಎತ್ತುವ ಬಹುಮುಖ್ಯ ಪ್ರಶ್ನೆಗಳು ಚರಿತ್ರೆ, ಬರಹ, ಆತ್ಮ ಜಿಜ್ಞಾಸೆ ಇವುಗಳಿಗೆ ಸಂಬಂಧಪಟ್ಟಿವೆ. ಸಂಘ, ಪಯಣ ಇವೆಲ್ಲವು ನಾವು ಕಟ್ಟಿಕೊಳ್ಳುವ ರಚನೆಗಳಲ್ಲವೆ? ಎಲ್ಲರಿಗೂ ಸ್ವಂತದ ಉದ್ದೇಶವಿರುವುದಾದರೆ ಪಯಣಕ್ಕೆ ಇರುವ ಉದ್ದೇಶವೇನು? ಸಂಘವೆಂದರೆ ಏನು? ಕಟ್ಟಳೆಗಳು ಹೇಗೆ ರಚನೆಯಾಗುತ್ತವೆ? ನಿರೂಪಕನು ಸಂಘದ ನಿಯಮಗಳನ್ನು ಮುರಿದರೂ ಅವನಿಗೆ ಶಿಕ್ಷೆ ಇಲ್ಲ. ಅವನು ಹೇಳಲು ಹೊರಟಿರುವ ಕತೆಗೆ ಎಷ್ಟೊಂದು ಎಳೆಗಳಿವೆಯಲ್ಲ?
ಕೆ. ಪ್ರಭಾಕರನ್‌ ಅನುವಾದಿಸಿದ ಜರ್ಮನಿಯ ಹರ್ಮನ್‌ ಹೇಸ್‌ ಬರೆದ ಕಾದಂಬರಿ ‘ಪೂರ್ವದೆಡೆಗಿನ ಪಯಣ’ ಕೃತಿಗೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

Read More

ಶಿಶಿರ ಮಾಸದಲ್ಲಿ ಕವಿತೆಯ ಓದು

ನೆರೂಡನ ಪ್ರಸಿದ್ಧ ಮಾತುಗಳು ಇಲ್ಲಿ ನೆನಪಾಗುತ್ತಿವೆ ‘ವಾಸ್ತವವಾದಿಯಲ್ಲದ ಕವಿ ಸತ್ತಿರುತ್ತಾನೆ. ಕೇವಲ ವಾಸ್ತವವಾದಿಯಾದ ಕವಿಯೂ ಸತ್ತಿರುತ್ತಾನೆ. ಕೇವಲ ವಿಚಾರ ಮಾತ್ರವೇ ಆಗಿರುವ ಕವಿಯನ್ನು ಮೂರ್ಖರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ! ಇದೂ ಕೂಡ ವಿಷಾದದ ಸಂಗತಿ’. ಡಾ. ಅರುಂಧತಿ ಅವರ ಕವಿತೆಗಳೂ ಇಂತಹ ತೊಡಕುಗಳನ್ನು ದಾಟಿ, ಜಟಿಲತೆ, ಆರ್ಭಟ, ರೊಚ್ಚು ಹಾಗೂ ಪ್ರತೀಕಾರದ ಸೋಂಕಿಲ್ಲದೆ, ಸರಳತೆಯಲ್ಲಿ ಅರಳಿವೆ. ಇಲ್ಲಿ ‘ಸರಳತೆ’ ಎಂದರೆ ಸರಳೀಕರಿಸಿದ್ದು ಎನ್ನುವ ಅರ್ಥದಲ್ಲಿ ಅಲ್ಲ! ಅನುಕಂಪ-ಕ್ರೌರ್ಯ, ನಂಬಿಕೆ-ದ್ರೋಹ ಇವುಗಳೆಲ್ಲದರ ಸಂಘರ್ಷ.
ಡಾ. ಅರುಂಧತಿಯವರ ಚೊಚ್ಚಲ ಕವನ ಸಂಕಲನ ‘ಜೀವ ಜಾಲದ ಸಗ್ಗ’ಕ್ಕೆ ಜಿ ವಿ ಆನಂದಮೂರ್ತಿ ಬರೆದ ಮುನ್ನುಡಿನೆರೂಡನ ಪ್ರಸಿದ್ಧ ಮಾತುಗಳು ಇಲ್ಲಿ ನೆನಪಾಗುತ್ತಿವೆ ‘ವಾಸ್ತವವಾದಿಯಲ್ಲದ ಕವಿ ಸತ್ತಿರುತ್ತಾನೆ. ಕೇವಲ ವಾಸ್ತವವಾದಿಯಾದ ಕವಿಯೂ ಸತ್ತಿರುತ್ತಾನೆ. ಕೇವಲ ವಿಚಾರ ಮಾತ್ರವೇ ಆಗಿರುವ ಕವಿಯನ್ನು ಮೂರ್ಖರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ! ಇದೂ ಕೂಡ ವಿಷಾದದ ಸಂಗತಿ’. ಡಾ. ಅರುಂಧತಿ ಅವರ ಕವಿತೆಗಳೂ ಇಂತಹ ತೊಡಕುಗಳನ್ನು ದಾಟಿ, ಜಟಿಲತೆ, ಆರ್ಭಟ, ರೊಚ್ಚು ಹಾಗೂ ಪ್ರತೀಕಾರದ ಸೋಂಕಿಲ್ಲದೆ, ಸರಳತೆಯಲ್ಲಿ ಅರಳಿವೆ. ಇಲ್ಲಿ ‘ಸರಳತೆ’ ಎಂದರೆ ಸರಳೀಕರಿಸಿದ್ದು ಎನ್ನುವ ಅರ್ಥದಲ್ಲಿ ಅಲ್ಲ! ಅನುಕಂಪ-ಕ್ರೌರ್ಯ, ನಂಬಿಕೆ-ದ್ರೋಹ ಇವುಗಳೆಲ್ಲದರ ಸಂಘರ್ಷ.
ಡಾ. ಅರುಂಧತಿಯವರ ಚೊಚ್ಚಲ ಕವನ ಸಂಕಲನ ‘ಜೀವಜಾಲದ ಸಗ್ಗ’ಕ್ಕೆ ಜಿ ವಿ ಆನಂದಮೂರ್ತಿ ಬರೆದ ಮುನ್ನುಡಿ

Read More

ಸಂಕಟ, ಸಂಘರ್ಷದ ಕಥೆ ಹೆಣೆಯುವ ಗೈರಸಮಜೂತಿ

 ಒಂದು ಕಾಲದ ನಮ್ಮ ಹಿಂದಿ ಕವಿಗಳಾದ ಬಚ್ಚನ್, ನಿರಾಲಾ, ಸುಮಿತ್ರಾನಂದನ್ ಪಂತರಂತಹ ಲೇಖಕರು ರೂಪಿಸಿಕೊಂಡಿದ್ದ ಆಜ್ಞೆಯತಾವಾದದ ಇನ್ನೊಂದು ಉದಾರೀಕೃತ ತಾತ್ವಿಕ ಸುಕುಮಾರ ರೂಪವೇ ಈ ಕಾದಂಬರಿಯ ಅಡಿಪಾಯದಲ್ಲೂ ಇದೆ ಎನ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಈ ಬಗೆಯಲ್ಲಿ ರಸರಮ್ಯಲೋಕವೊಂದನ್ನು ಕಟ್ಟಿಕೊಡುವ ಕಥನಗಳು ಇಲ್ಲಿವೆ.  ರಾಘವೇಂದ್ರ ಪಾಟೀಲರ “ಗೈರ ಸಮಜೂತಿ” ಕಾದಂಬರಿಯ ಕುರಿತು ಮಾಲಿನಿ ಗುರುಪ್ರಸನ್ನ ಬರಹ

Read More

ಮಧ್ಯಮಾವತಿಯ ಅಂತರಂಗದಲ್ಲಿ ‘ಅವನು’

ಈ ಕವನಸಂಕಲನದಲ್ಲಿ , ಪೂರ್ಣಿಮಾ ಸುರೇಶ್ ಕಟ್ಟಿಕೊಡುವ ಅಂತರಂಗದ ಈ “ಅವನು” ಅನ್ನುವ ಪಾತ್ರ ಬಹಳ ಕಾಡುತ್ತದೆ. ಅದು ‘ಅವಳು’ ಎಂಬುದಾಗಿ ಬದಲಾಗಲೂ ಆಗಬಹುದು. ಅಂತರಂಗದ ‘ಅವನು’  ಬಹಳಷ್ಟು ಪ್ರಶ್ನೆ ಕೇಳುತ್ತಾನೆ. ಯಾವುದೋ ನಮ್ಮ ಸಮಸ್ಯೆಗಳಿಗೆ ಪರಿಹಾರವಾಗುತ್ತಾನೆ. ಎಷ್ಟೋ ಸಲ ಅರ್ಥವಾಗದೇ ಸತಾಯಿಸುತ್ತಾನೆ. ಯಾವುದೋ ಅರ್ಥವಾಗದ ಅಚ್ಚರಿಯನ್ನು ನಮ್ಮಲ್ಲಿ ಉಳಿಸುತ್ತಾನೆ. ಅಕಾಲದ ಮಳೆಯ ಹಾಗೆ. ಹಾಗೆಂದು ಇಲ್ಲಿ ರೂಪಕಗಳ ಮೂಲಕ ಮಾತನಾಡುವ ಕವಿತೆಗಳು ಎಲ್ಲವನ್ನೂ ಬಿಟ್ಟುಕೊಡಲೂ ತಯಾರಿಲ್ಲ.   ಪೂರ್ಣಿಮಾ ಸುರೇಶ್‍ ಹೊಸಕವನ ಸಂಕಲನ ‘ಮಧ್ಯಮಾವತಿ’ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಅನಿಸಿಕೆ.

Read More

ದೊಡ್ಡವರಿಗೆ ಬುದ್ಧಿ ಹೇಳಬಲ್ಲ ಹಾರುವ ಕುದುರೆ

ಮಕ್ಕಳ ಮನೋಭಾವವನ್ನು ಗ್ರಹಿಸಿ ರಚಿಸಿರುವ ಈ ಸಂಕಲನದಲ್ಲಿ  ಸಾಮಾನ್ಯ ಕಥೆಗಳೂ ಇವೆ. ಜೊತೆಗೆ ಅಸಾಮಾನ್ಯ ಫ್ಯಾಂಟಸಿ ಕಥೆಗಳೂ ಇವೆ. ಕಲ್ಪನೆಯನ್ನು ಇಷ್ಟಪಡುವ ಮಕ್ಕಳಿಗೆ ಫ್ಯಾಂಟಸಿ ಇಷ್ಟವಾಗುತ್ತದೆ. ಅವರ  ಇಷ್ಟವನ್ನು ಗ್ರಹಿಸಿ , ಅವರು ಕಥೆಗಳನ್ನು ಪೋಣಿಸಿದ್ದಾರೆ. ಫ್ಯಾಂಟಸಿ ಕಥೆಗಳನ್ನು ಹೇಳಲು ಕಾಲ್ಪನಿಕ ಅಜ್ಜನೊಬ್ಬನನ್ನು ಸೃಷ್ಟಿಸಿಕೊಂಡಿದ್ದಾರೆ.   ನಾಗರಾಜ್ ಎಂ ಹುಡೇದ  ಬರೆದ ‘ಅವತಾರ್ ಮತ್ತು ಹಾರುವ ಕುದುರೆ’ ಕಥಾಸಂಕಲನದ ಕುರಿತು ಪ.ನಾ.ಹಳ್ಳಿ ಹರೀಶ್‍ ಕುಮಾರ್ ಅವರ ಅಭಿಪ್ರಾಯ  ಇಲ್ಲಿದೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ