Advertisement

Category: ಸಾಹಿತ್ಯ

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಯಾವಾಗ ಶಾಂತಮ್ಮ ಮೃದುಲಾಳ ಆರೈಕೆಯಲ್ಲಿ ನಾಲ್ಕು ದಿನ ಕಳೆದರೋ, ಮೃದುಲಾಳ ಮಂದಸ್ಮಿತ ಮುಖ, ಸ್ವಲ್ಪವೂ ಬೇಸರಿಸದೆ ಗಂಡನನ್ನು ಅನುಸರಿಸಿಕೊಂಡು ಹೋಗುವ ಪರಿ, ತಾನು ಗರ್ಭಿಣಿಯಾಗಿದ್ದರೂ ತನ್ನ ಕೆಲಸ ಬೊಗಸೆ ಕಡಿಮೆ ಮಾಡಿಕೊಳ್ಳದೆ ಪಾದರಸದಂತೆ ಓಡಾಡುವ ರೀತಿ, ಇವನ್ನೆಲ್ಲಾ ನೋಡುವಾಗ ತಮ್ಮ ಬಗ್ಗೆಯೇ ನಾಚಿಕೆಯಾಯಿತು ಶಾಂತಮ್ಮನವರಿಗೆ.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ರೂಪಾಂತರ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಿ.ಎಸ್.ರಾಮಸ್ವಾಮಿ ಕತೆ

ಬ್ಯಾಂಕಿನಿಂದ ಫೋನು ಬಂತು. ಐವತ್ತು ಲಕ್ಷದ ಓಡಿ ಆಗಿದೆ ಅಂತ ಮ್ಯಾನೇಜರು ಹೇಳಿದರು. ಹಾಗಾದರೆ ಎಲ್ಲೋ ಎಡವಟ್ಟಾಗಿದೆ ಅಂತ ಮನಸ್ಸು ಹೇಳಿತು. ಯಾವತ್ತೂ ಮಕ್ಕಳನ್ನು ಅನುಮಾನಿಸದವನು ನನ್ನ ಬ್ಯಾಂಕ್ ಪಾಸ್ ಪುಸ್ತಕ, ಡಿಪಾಸಿಟ್ ಪತ್ರಗಳು, ಅಂಚೆ ಕಛೇರಿ ಎಮ್.ಐ.ಎಸ್‌ಗಳು ಇರುವುದನ್ನು ಖಾತರಿ ಮಾಡಿಕೊಂಡೆ. ಮಗಳು ಸುಧಾ ಹೆಸರಲ್ಲಿ ನಾಮಿನೇಶನ್ ಮಾಡಿದ್ದ ಬ್ಯಾಂಕ್ ಸರ್ಟಿಫಿಕೇಟ್ ವಿತ್‌ಡ್ರಾ ಆಗಿರುವುದೂ, ಸುಧಾಕರನ ಹೆಸರಲ್ಲಿ ಇಟ್ಟಿದ್ದ ಎಫ್.ಡಿಗಳು ಮಾಯವಾಗಿರುವುದೂ ಗೊತ್ತಾಯಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಿ.ಎಸ್.ರಾಮಸ್ವಾಮಿ ಬರೆದ ಕತೆ “ಜೂಜಿಗೆ ಕೂತವರ ಜುಜುಬಿ ಆಸೆಗಳು….” ನಿಮ್ಮ ಓದಿಗೆ

Read More

ಸುಬ್ರಹ್ಮಣ್ಯ ಹೆಗಡೆ ಬರೆದ ಈ ಭಾನುವಾರದ ಕತೆ

ಅಪರಾಧವು ಸಾಮೂಹಿಕವಾದಾಗ ಅದು ಸಾಮಾಜಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ತನ್ಮೂಲಕ ನಮ್ಮ ಊರಿನ ಗಂಡಸರೆಲ್ಲ ತಿಂಗಳಿಗೆ ಒಂದೆರಡು ಬಾರಿ ಟೆಂಟಿನಲ್ಲಿ ಬಿಸಿಯಾಗತೊಡಗಿದರು. ಆಸೆಗಳಿಗೆ ಬೇಧಭಾವವಿಲ್ಲ. ಎಲ್ಲರಿಗು ಆಸೆಗಳಿದ್ದರಿಂದ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕೆಲವು ವರ್ಷಗಳ ನಂತರ ತಾಲೂಕು ಸೆಂಟರಿನಲ್ಲಿ ಮಿನಿ ಥೇಟರು, ವಿಡಿಯೋ ಪಾರ್ಲರುಗಳು ಶುರುವಾದ ಕಾರಣ ಜನರಿಗೆ ಒಳ್ಳೆಯ ಕ್ಲಾರಿಟಿಯ ಅನುಭವ ಸಿಕ್ಕು, ಟೆಂಟು ಸತ್ತು ಹೋಯಿತು.
ಸುಬ್ರಹ್ಮಣ್ಯ ಹೆಗಡೆ ಬರೆದ ಕತೆ “ಪರಾಜಿತ ವಿಠ್ಠಲ ವಿಜಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಗುಂಡುರಾವ್ ದೇಸಾಯಿ ಬರೆದ ಈ ಭಾನುವಾರದ ಕತೆ

ಸಂಜೆ ಅಪ್ಪ ಬಾಳೆಹಣ್ಣು ತಂದಿದ್ದನ್ನು ನೋಡಿದ್ದ. ಕೂಡಲೆ ರಾತ್ರಿ ಎದ್ದು ಡಜನ್ ಬಾಳೆ ಹಣ್ಣನ್ನು ತಿಂದು ಮಲಗಿದ. ಬೆಳಿಗ್ಗೆ ಹಣ್ಣು ಇಲ್ಲದನ್ನು ನೋಡಿ ಅಮ್ಮಗ ನೋಡಿ ಗಾಭರಿಯಾಯಿತು. ಬಾಳೆ ಹಣ್ಣು ತಿಂದವರಾರು? ಸಮುನ ಮೇಲೆ ಅನುಮಾನ ಬಂದು “ಸತ್ಯ ಹೇಳು ತಿಂದವನು ನೀನು ತಾನೆ?” ಎಂದು ತರಾಟೆ ತೆಗೆದುಕೊಂಡಳು. ಸಮು ನಡೆದ ವಿಷಯವನ್ನೆಲ್ಲ ಹೇಳಿ ಬೆಳಿಗ್ಗೆ ಮಲವಿಸರ್ಜನೆ ಮಾಡುವಾಗ ಸಿಕ್ಕ ಬೀಜಗಳನ್ನು ಖುಷಿಯಿಂದ ತೋರಿಸಿ “ಅಮ್ಮಾ, ನೋಡು ನನ್ನ ಹೊಟ್ಟೆಯಲ್ಲಿ ಹುಣಸೆ ಮರ ಬೆಳೆಯಲು ಸಾಧ್ಯನ ಇಲ್ಲ?” ಎಂದು ಗೆಲುವಿನಿಂದ ತೋರಿಸಿದ.
ಗುಂಡುರಾವ್‌ ದೇಸಾಯಿ ಬರೆದ ಮಕ್ಕಳ ಕತೆ “ಸಮು ಮತ್ತು ಹುಣಸೆ ಬೀಜ”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸದಾಶಿವ್ ಸೊರಟೂರು ಕತೆ

ರಾತ್ರಿಯಾದರೂ ದೊಡ್ಡಪ್ಪ ಊರು ಮುಟ್ಟಿದ ಬಗ್ಗೆ ಫೋನ್ ಬರಲಿಲ್ಲ. ಆಯಾಸದಲ್ಲಿ ಮರೆತು ಹೋಗಿರಬೇಕೆಂದು ಸಮಾಧಾನಿಸಿಕೊಂಡೆ. ರಾತ್ರಿ ಎಷ್ಟೊ ಹೊತ್ತಿನವರೆಗೂ ನಿದ್ದೆ ನನ್ನ ಬಳಿ ಸುಳಿಯಲಿಲ್ಲ. ಇಂಥ ವಿಷಯಗಳಲ್ಲಿ ನಿದ್ದೆಯೆಂದೂ ಕೂಡ ಜೊತೆಗಾರನಾಗಿರುವುದಿಲ್ಲ. ಕಣ್ಣಿಗೆ ನಿದ್ದೆ ಹತ್ತಿಕೊಳ್ಳುವ ಹೊತ್ತಿಗೆ ಮುಂಜಾವು ಬಂದಿತ್ತು. ಇನ್ನೂ ಅರೆ ಮಂಪರು. ಗಾಢ ನಿದ್ದೆಯೇನ್ನಲ್ಲ. ಮೊಬೈಲ್ ರಿಂಗಣಸಿತು. ಹರೀಶ ಕಾಲ್ ಮಾಡ್ತಿದ್ದಾನೆ. ಏನು ಇಷ್ಟೊತ್ತಲ್ಲಿ ಫೋನ್? ಯಾಕೊ ಸಣ್ಣಗೆ ಭಯವಾಯಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸದಾಶಿವ್ ಸೊರಟೂರು ಕತೆ “ಮುಗಿಲ ದುಃಖ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ