Advertisement

Category: ದಿನದ ಪುಸ್ತಕ

ರಚನಾಕೌಶಲ ಬಿಂಬಿಸುವ ಬುದ್ಧಚರಣ

ಇಲ್ಲಿ ಅಪೂರ್ವವಾದ ರಚನಾ ಸೌಂದರ್ಯವನ್ನು ಗಮನಿಸಬಹುದು. ಭಗವಂತ ಸುಗತನ ಕರುಣೆಯೆಂಬ ಮನದ ಹುತ್ತಗಟ್ಟುವಿಕೆ ನಾಲ್ಕು ಪಾದಗಳ ಪದ್ಯಗಳಿಂದ ತೊಡಗಿ, ಎಂಟು ಮತ್ತು ಹದಿನಾಲ್ಕಕ್ಕೆ ಏರಿ; ಮತ್ತೆ ಎಂಟಕ್ಕಿಳಿದು ನಾಲ್ಕು ಪಾದಗಳಿಗೆ ಕೊನೆಯಾಗಿ ಒಂದು ಪಾದದ “ಓಂ ಶಾಂತಿಃ ಶಾಂತಿಃ ಶಾಂತಿಃ” ಎಂಬ ಉಕ್ತಿಯಲ್ಲಿ ಕೊನೆಯಾಗುವುದು ಧ್ವನಿಪೂರ್ಣವಾಗಿದೆ. ಕರುಣ ರಸದ ಆತ್ಯಂತಿಕ ನೆಲೆ ಶಾಂತರಸದಲ್ಲೇ ಎಂಬುದು ಇಡೀ ಕಾವ್ಯ ಧ್ವನಿಸುತ್ತದೆ. ಇದನ್ನು ಕವಿಯು ಕೇವಲ ಕಾವ್ಯದಲ್ಲಿ ಮಾತ್ರ ಬಿಂಬಿಸದೆ ತನ್ನ ರಚನಾ ಕೌಶಲದಲ್ಲೂ ಔಚಿತ್ಯಪೂರ್ಣವಾಗಿ ಕಾಣಿಸಿರುವುದು ಮನಮುಟ್ಟುವಂಥದ್ದು..
ಹೆಚ್.ಎಸ್.ವೆಂಕಟೇಶಮೂರ್ತಿ ಬರೆದ ಬುದ್ಧ ಚರಣ ಕವನ ಸಂಕಲನದ ಕುರಿತು ಕೃಷ್ಣಪ್ರಕಾಶ್ ಉಳಿತ್ತಾಯ ಬರಹ

Read More

‘ವೀರಕೇಸರಿ ಅಮಟೂರು ಬಾಳಪ್ಪ’ ದೇಶಭಕ್ತನೊಬ್ಬನ ರೋಚಕ ಅಧ್ಯಾಯ

ಅಮಟೂರು ಬಾಳಪ್ಪನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ಹೆಚ್ಚೇನೂ ಸಿಗುವುದಿಲ್ಲ. ಸಂಗೊಳ್ಳಿ ರಾಯಣ್ಣನ ಜೊತೆ ಜೊತೆಯಾಗಿ ಹೆಗಲೆಣೆಯಾಗಿ ನಿಂತು ಕಿತ್ತೂರಿನ ರಕ್ಷಣೆಗೆ ನಿಂತ ಶೂರ ಆತ. ಜೀವನ ಮೌಲ್ಯಗಳಿಗೆ ಕುಂದಾಗದಂತೆ, ದೇಶದ ರಕ್ಷಣೆಗೆ ತೊಡಕಾದಂತೆ ಜೀವನ ನಡೆಸಿದ ವ್ಯಕ್ತಿತ್ವ ಬಾಳಪ್ಪನದು. ಆತನಿಗೆ ಸಂಬಂಧಿಸಿದಂತೆ ಲಭ್ಯವಾಗುವ ಕೆಲವೇ ಮಾಹಿತಿಗಳ ಜಾಡು ಹಿಡಿದು, ಸಂಶೋಧನೆಗಳ ಆಕರಗಳನ್ನು ಬಳಸಿಕೊಮಡು 
ಬಾಳಾಸಾಹೇಬ ಲೋಕಾಪುರ ಅವರು ಬರೆದಿರುವ ಕೃತಿ’ವೀರಕೇಸರಿ ಅಮಟೂರು ಬಾಳಪ್ಪ’ . ಈ ಕಾದಂಬರಿ ಕುರಿತು ತೇಜಾವತಿ ಎಚ್‌ ಡಿ ಬರಹ

Read More

ಗಾಳಿಗೆ ಜೋಗುಳವಾಗುವ ಕವಿತೆಗಳು

ಇಡಿಯಾಗಿ ಕವಿತೆ ನಮ್ಮೊಳಗಿನ ಅರಿವಿನ ಅನುಪಸ್ಥಿತಿಯ ಕಾರಣವಾಗಿ ಮನುಕುಲಕ್ಕೆ ಮಾರಕವಾಗಿರುವ, ಸ್ವಯಂ ನಾವೇ ಸೃಷ್ಟಿಸಿಕೊಂಡಿರುವ ಜಾತಿ, ಮತ, ಪಂಥಗಳೆಂಬ ರುಗ್ಣಗಳಿಂದ ಬಾಧೆಗೊಳಗಾಗಿರುವ ವ್ಯವಸ್ಥೆಯನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಲು ಪ್ರಯತ್ನಿಸುತ್ತದೆ. ಇಡಿಯಾಗಿ ಕವಿತೆ ರೂಪಕಗಳ ಮೂಲಕವೇ ಓದುಗನೊಂದಿಗೆ ಮುಖಾಮುಖಿಯಾಗುತ್ತ, ನಾವೆಲ್ಲ ಕಂಡೂ ಕಾಣದಂತಿರುವ ಲೋಕದ ಅಸಹ್ಯಗಳನ್ನು ಕಾಣಿಸುತ್ತ ಹೋಗುತ್ತದೆ! ಹಾಗೆ ನೋಡಿದರೆ ಈ ಕವಿತೆಯಲ್ಲಿ ಬರುವ ‘ಫಕೀರ’ ಬೇರಾರೂ ಆಗಿರದೆ ಸಮಾಜವನ್ನು ನೈತಿಕತೆಯ ಪಾತಳಿಯ ಮೇಲೆ ಮುನ್ನಡೆಸಲು ಬೇಕಾಗಿರುವ ‘ಅರಿವು’ ಎಂಬ ಪ್ರಖರವಾದ ಬೆಳಕೇ ಆಗಿದೆ.
ದೇವು ಮಾಕೊಂಡ ಕವನ ಸಂಕಲನ ‘ಗಾಳಿಗೆ ತೊಟ್ಟಿಲು ಕಟ್ಟಿ’ ಪುಸ್ತಕದ ಕುರಿತು ಕಲ್ಲೇಶ್ ಕುಂಬಾರ್, ಹಾರೂಗೇರಿ ಬರಹ

Read More

ಅವ`ಲಕ್ಕಿ’ ಎಂಬ ಅದೃಷ್ಟಶಾಲಿ ತಿನಿಸು!

ತೌಳವನಾಡಿನಲ್ಲಿ ಅವಲಕ್ಕಿಗೆ ಬಜಿಲು ಎಂದು ಹೇಳುತ್ತಾರೆ. ಬೆಳಗ್ಗೆ ಅಥವಾ ಸಂಜೆಯ ತಿಂಡಿಗೆ ಸಜ್ಜಿಗೆ-ಬಜಿಲು ಕರಾವಳಿಯಲ್ಲಿ ಬಹಳ ಪ್ರಸಿದ್ಧ. ಸಜ್ಜಿಗೆ ಎಂದರೆ ಉಪ್ಪಿಟ್ಟು. ಇದು ಕರಾವಳಿಯ ಹೊರಗಿನವರಿಗೆ ತಿಳಿದಿರಲಿಕ್ಕಿಲ್ಲ. ಇನ್ನೊಂದು ಅಷ್ಟೇ ಪ್ರಸಿದ್ಧ ತಿಂಡಿಯೆಂದರೆ ಕಡ್ಳೆ-ಬಜಿಲು. ಇವು ಇಲ್ಲಿನ ಹೊಟೇಲುಗಳಲ್ಲೂ ಸಿಗುತ್ತವೆ. ಸಮಾರಂಭಗಳಲ್ಲಿ ಉಳಿದ ತಿಂಡಿಗಳಿಗಿಂತ ಅವಲಕ್ಕಿ-ಸಜ್ಜಿಗೆ ಮಾಡುವುದೇ ಹೆಚ್ಚು. ಏಕೆಂದರೆ, ಇದನ್ನು ತಯಾರಿಸಲು ಕಡಿಮೆ ಶ್ರಮ-ಸಮಯ-ಪರಿಕರ ಸಾಕು. ಮಧ್ಯಾಹ್ನವಾದರೂ ಹಸಿವೆಯಾಗುವುದಿಲ್ಲ. ಹೊಟ್ಟೆಯಲ್ಲಿ ಕಾಂಕ್ರೀಟ್ ಹಾಕಿದಂತೆ ಗಟ್ಟಿ!
ಸಹನಾ ಕಾಂತಬೈಲು ಬರೆದ ಲಲಿತ ಪ್ರಬಂಧಗಳ ಸಂಕಲನ ‘ಇದು ಬರಿ ಮಣ್ಣಲ್ಲ’ ಪುಸ್ತಕದಿಂದ ಒಂದು ಪ್ರಬಂಧ ನಿಮ್ಮ ಓದಿಗೆ

Read More

ಗಿಣಿಬಿಸ್ಕತ್ತು ಕಾದಂಬರಿಯ ಒಂದೆಸಳು

ನಾವು ಮಕ್ಕಳು ಒಂದು ಕಡೆ ಆಡುತ್ತಿದ್ದೆವು. ಮೋಡ ಕಪ್ಪಾಯಿತು. ಮೀನು ಸಾರಿನ ಸಂಭ್ರಮದ ಮಧ್ಯ ಮಳೆ ಬರುವುದು ಚಿಂತೆಗೀಡು ಮಾಡಿತ್ತು. ಸಂದಿಗೊಂದಿಗಳಲ್ಲಿ, ಮೂಲೆಮುಡುಕುಗಳಲ್ಲಿ ಇದ್ದ ಪುಳ್ಳೆ ಸೌದೆಗಳನ್ನು ಅಜ್ಜಿ ಅದೇನೇನೋ ಗೊಣಗುತ್ತಾ ಎತ್ತಿ ತಂದು ಒಳಗೆ ಹಾಕುತ್ತಿದ್ದಳು. ಅಜ್ಜ ರಾತ್ರಿ ಕತ್ತಲಾದಾಗ ಬೆಳಕು ಮಾಡಲು ಸೀಮೆ ಎಣ್ಣೆ ದೀಪದ ಬತ್ತಿಗಳನ್ನು ಹಿಚುಕಿ ಸರಿಪಡಿಸುತ್ತಿದ್ದ. ಚಿಕ್ಕಪ್ಪ, ಅಪ್ಪ ಎಲ್ಲಿ ಮನೆ ಸೋರುತ್ತದೆಯೋ ಅಲ್ಲಿಗೆ ಕಾತಾಳೆ ಪಟ್ಟೆ, ಅಡಿಕೆ ಪಟ್ಟೆಗಳನ್ನು ತೂರಿಸುತ್ತ ಸೂರನ್ನು ಸರಿಪಡಿಸುತ್ತಿದ್ದರು. ಅಜ್ಜ ಮಾತ್ರ ‘ಈ ಹಾಳಾದ್ದು ಎಲ್ಲೋಯ್ತೋ ಕಾಣೆ… ಹೊತ್ನಂತೆ ಮನೆಗೆ ಬರಬ್ಯಾಡ್ವ’ ಅಂತ ಕೆಂಪಿಯನ್ನು ನೆನಪು ಮಾಡಿಕೊಳ್ಳುತ್ತಿದ್ದನು.
ಆಲೂರು ದೊಡ್ಡನಿಂಗಪ್ಪ ಬರೆದ ‘ಗಿಣಿ ಬಿಸ್ಕತ್ತು’ ಹೊಸ ಕಾದಂಬರಿಯ ಕೆಲ ಪುಟಗಳು ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ