Advertisement

Category: ಪ್ರವಾಸ

ಶಾಲ್ಮಲಿಯ ಸಹಸ್ರಲಿಂಗ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ನೀರಿನಿಂದ ಮೇಲೆದ್ದ ದೊಡ್ಡ ಬಂಡೆಯೊಂದು ಶಿಲ್ಪಿಯೋರ್ವನಿಗೆ ಬಸವಣ್ಣನಂತೆ ತೋರಿ ಒಂದೆಡೆ ಮುಖಭಾಗವನ್ನೂ ಬಂಡೆಯ ಅಂಚಿಗೆ ಬೆನ್ನುಭಾಗವನ್ನೂ ಕೆತ್ತಿದ್ದಾನೆ. ನಡುವಣ ಬಂಡೆ ಯಥಾರೂಪದಲ್ಲೇ ಇದೆ. ಸಾಮಾನ್ಯವಾಗಿ ಶಿವಾಲಯಗಳ ಬಾಗಿಲಲ್ಲಿ ಕಂಡುಬರುವ ಪುರುಷಾಮೃಗಕ್ಕೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮನುಷ್ಯನ ಮುಖ, ಪ್ರಾಣಿಯ ದೇಹವಿದ್ದು ಘಂಟಾನಾದ ಮಾಡುವ ಕಾಯಕದಲ್ಲಿ ಈ ಪುರುಷಾಮೃಗ…”

Read More

ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಕಾಳಿಕಾದೇವಿ ಅಷ್ಟಭುಜಗಳಲ್ಲಿ ಬಗೆಬಗೆಯ ಆಯುಧಗಳನ್ನು ಧರಿಸಿ ತಾನು ಸಂಹರಿಸಿದ ದೈತ್ಯನ ಮೇಲೆ ಕುಳಿತಿದ್ದಾಳೆ. ಶಿಲ್ಪದ ಪ್ರಭಾವಳಿಯಲ್ಲಿ ಬೇತಾಳಗಣಗಳು ಆಯುಧಗಳನ್ನು ಹಿಡಿದು ನರ್ತಿಸುತ್ತಿರುವಂತೆ ರೂಪಿಸಿರುವುದು ಸ್ವಾರಸ್ಯಕರವಾಗಿದೆ. ಗರ್ಭಗುಡಿಯ ಬಾಗಿಲವಾಡದ ಮೇಲೆ ಕಾಳಿಯ ಮುಖವನ್ನು ಚಿತ್ರಿಸಿದೆ. ಉಳಿದ ಗರ್ಭಗುಡಿಗಳಲ್ಲಿ ಭೈರವನ ಮೂರ್ತಿಯನ್ನೂ ಶಿವಲಿಂಗವನ್ನೂ ಇರಿಸಲಾಗಿದೆ. ಶಿವಲಿಂಗದ ಎದುರಿಗೆ ನವರಂಗದಲ್ಲಿ….”

Read More

ಬಾಣಾವರದ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಬಾಣಾವರವು ನಿರಂತರ ಯುದ್ಧ ಹಾಗೂ ಸೈನಿಕ ಚಟುವಟಿಕೆಗಳ ಕೇಂದ್ರವಾಗಿದ್ದುದರಿಂದಲೋ ಏನೋ ಇಲ್ಲಿ ಹೊಯ್ಸಳ ಶಿಲ್ಪಕಲೆಯ ವೈವಿಧ್ಯವನ್ನು ಬಿಂಬಿಸುವ ದೊಡ್ಡ ದೇಗುಲಗಳ ನಿರ್ಮಾಣವಾಗಿಲ್ಲ. ಆದರೆ ಇತಿಹಾಸವನ್ನು ನೆನಪಿಸುವ ಅನೇಕ ದೇವಾಲಯಗಳು ಇಲ್ಲಿ ಕಂಡುಬರುತ್ತವೆ. ಬಾಣಾವರದ ಬಾಗಿಲಲ್ಲಿರುವೋನೆ ಬಾಲೆಯ ಮಗನೆ ಬೆನವಣ್ಣಾ ಎಂದು ಜನಪದರ ಸ್ತುತಿಗೆ ಪಾತ್ರನಾದ ಗಣಪತಿಯ ಗುಡಿ ಈಗ ಊರಿನ ನಡುಭಾಗದಲ್ಲಿರುವ ಬಾಣೇಶ್ವರನ ಗುಡಿಯ ಪಕ್ಕದಲ್ಲಿದೆ.”

Read More

ಬೆಳ್ಳೂರಿನ ಆದಿಮಾಧವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಪ್ರಧಾನ ಗರ್ಭಗುಡಿಯ ಹೊರಗೆ ನವರಂಗದ ಎರಡು ಬದಿಗಳಲ್ಲಿ ಗಣೇಶ ಹಾಗೂ ಮಹಿಷಾಸುರ ಮರ್ದಿನಿಯರ ಸೊಗಸಾದ ವಿಗ್ರಹಗಳಿವೆ.. ಪಾಶಾಂಕುಶಧಾರಿಯಾಗಿ ಸರ್ವಾಲಂಕೃತನಾದ ಗಣೇಶನ ವಿಗ್ರಹ ಮುದ್ದಾಗಿದೆ. ಕುಸಿದ ಮಹಿಷನ ದೇಹದಿಂದ ಹೊರಬಂದ ರಕ್ಕಸನನ್ನು ಮೆಟ್ಟಿ ಗೋಣ್ಮುರಿಯುತ್ತಿರುವ ದುರ್ಗೆಯ ಶಿಲ್ಪವೂ ಈ ಮಾದರಿಯ ಇತರ ಹೊಯ್ಸಳ ಶಿಲ್ಪಗಳಂತೆ ಅಧ್ಯಯನ ದೃಷ್ಟಿಯಿಂದಲೂ ಗಮನಾರ್ಹವಾಗಿದೆ.”

Read More

ನಾಗಲಾಪುರದ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಪೂರ್ವಕಾಲದಲ್ಲಿ ಅಗ್ರಹಾರವಾಗಿದ್ದ ನಾಗಲಾಪುರ ಗ್ರಾಮದ ನಡುವೆ ಇರುವ ಕೇಶವ ದೇಗುಲವಾಗಲಿ ಹೊರವಲಯದಲ್ಲಿರುವ ಕೇದಾರೇಶ್ವರ ದೇಗುಲವಾಗಲಿ ಪೂರ್ಣಪ್ರಮಾಣದ ಶಿಲ್ಪಕಲಾಸಂಪನ್ನವಾದ ಗುಡಿಗಳೇನೂ ಅಲ್ಲ. ಕುಸಿತದ ಅಪಾಯದಲ್ಲಿದ್ದು ಪುರಾತತ್ವ ಇಲಾಖೆಯ ಸಮರ್ಥ ಮಾರ್ಗದರ್ಶನದಲ್ಲಿ ಪುನರ್ಜೋಡಣೆಗೊಂಡು ಸುಸ್ವರೂಪ ತಾಳಿರುವ ಈ ಎರಡೂ ಗುಡಿಗಳಿಗೆ…”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ