Advertisement

Category: ದಿನದ ಪುಸ್ತಕ

ಬೊಳುವಾರು ಆತ್ಮಕತೆ ‘ಮೋನು ಸ್ಮೃತಿ’ಯ ಪುಟಗಳು

ಆ ದಿನಗಳಲ್ಲಿ ನನ್ನೂರ ನನ್ನ ಓದುಗರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ ಮುಸ್ಲಿಮೇತರರು. ದುಡ್ಡು ಕೊಟ್ಟು ದಿನಪತ್ರಿಕೆಗಳನ್ನೂ, ವಾರ ಅಥವಾ ಮಾಸ ಪತ್ರಿಕೆ ಗಳನ್ನೂ ತರಿಸಿಕೊಂಡು ಟೀಪಾಯಿಗಳನ್ನು ಚಂದಗಾಣಿಸುತ್ತಿದ್ದವರು ಅವರು ಮಾತ್ರ. ಓದುಗರಲ್ಲಿ ಹೆಚ್ಚಿನವರು ಅಡಿಕೆಭಟ್ಟರುಗಳು. ಹಾಗಾದರೆ, ಅವರೆಲ್ಲರಿಂದ ನನಗೆ ಸಿಗುತ್ತಿದ್ದ ಮೆಚ್ಚುಗೆಗಳೆಲ್ಲವೂ ಮುಸ್ಲಿಮರ ಕಂದಾಚಾರಗಳನ್ನು ಪ್ರಶ್ನಿಸುತ್ತಿರುವುದಕ್ಕೆ ಮಾತ್ರವೆ? ಹಿಂದೂಗಳ ಕಂದಾಚಾರಗಳನ್ನು ಪ್ರಶ್ನಿಸಿದರೆ, ಅವರಿಗೂ ನಾನೊಬ್ಬ ‘ಹರಾಮಿ’ಯಾಗಿ ಕಾಣಿಸಲಾರಂಭಿಸುತ್ತೇನೆಯೆ? ಯಾರಲ್ಲಿ ಕೇಳುವುದು?
ಬೊಳುವಾರು ಮಹಮದ್ ಕುಂಞಿ ಅವರ ಆತ್ಮಕತೆ ‘ಮೋನು ಸ್ಮೃತಿ’ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಭಾಷಾಸತ್ರದ ಕಡೆಗಿನ ಪಯಣದಲ್ಲಿ ಜ್ಞಾನವಿಕಾಸದ ಹೆಜ್ಜೆಗುರುತುಗಳು

ನಾಲ್ಕು ವರ್ಷಗಳ ದೀರ್ಘಕಾಲದ ಬರಹದೊಂದಿಗೆ ರೂಪುಗೊಂಡ ಕಾದಂಬರಿ ಎನ್ನಬಹುದಾದ ಪ್ರಕಾರದಲ್ಲಿರುವ ಕೃತಿ ‘ವರ್ಣಕ’. ಹಾಗೆ ನೋಡಿದರೆ, ಇದನ್ನು ಕಾದಂಬರಿ ಎಂದರೆ ತುಸು ಹೃಸ್ವವಾದದಂತೆ ಭಾಸವಾಗುತ್ತದೆ. ಬಣ್ಣದ ಹೂವುಗಳ ಮಾಲೆಯನ್ನು ನೇಯ್ದಂತೆ, ಭಾಷಾ ಕ್ಷೇತ್ರದ ವೈವಿಧ್ಯಮಯ ಬೆಳವಣಿಗೆಗಳನ್ನು ಕಥೆಯೆಂಬ ಸೂತ್ರದಲ್ಲಿ ಲೇಖಕರು ಬಂಧಿಸಿದ್ದಾರೆ . ಅಲ್ಲಿ ಕಥೆಯ ಮುನ್ನಡೆಗೋಸ್ಕರ ವಿಸ್ಮಯ, ಭ್ರಮೆಯೆಂಬಂತಹ ಕಲ್ಪನೆಗಳ ನೆರವನ್ನು ಪಡೆದಿದ್ದಾರೆ. ಭಾರತೀಯ ಭಾಷಾ ಗಣಕ ಪಿತಾಮಹ ಕಿನ್ನಿಕಂಬಳ ಪದ್ಮನಾಭ ರಾವ್‍ ಬರೆದ ‘ವರ್ಣಕ’ ಕಾದಂಬರಿಯ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ  ಇಲ್ಲಿದೆ. 

Read More

ಡಾ. ಗೀತಾ ಶೆಣೈ ಅನುವಾದಿಸಿರುವ “ಅದೃಷ್ಟ” ಕಾದಂಬರಿಯ ಒಂದು ಅಧ್ಯಾಯ

ಇದನ್ನು ಯಾರು, ಯಾವಾಗ ಕಟ್ಟಿಸಿದರೋ? ಯಾವ ತಲೆಕೆಟ್ಟ ಮನುಷ್ಯ ಇದರ ವಿನ್ಯಾಸ ರೂಪಿಸಿದನೋ? ಮೂರು ಮನೆವಾಳ್ತೆಗಳು ಇರಲು ಅನುಕೂಲವಾಗುವ ಹಾಗೆ ಹೇಗೇಗೋ ಕೋಣೆಗಳನ್ನು ಹೊಂದಿಸಿ ಈ ಕಾವಲುಮನೆಯನ್ನು ಕಟ್ಟಲಾಗಿದೆ. ಆದರೆ ಇದಕ್ಕೆ ಸರಿಯಾದ ಕಿಟಿಕಿಗಳಾಗಲೀ, ಬಾಗಿಲುಗಳಾಗಲೀ ಇಲ್ಲ. ಕೆಲವು ಕೋಣೆಗಳಲ್ಲಿಯಂತೂ ನಡುಮಧ್ಯಾಹ್ನವೂ ಕತ್ತಲೆ ತುಂಬಿರುತ್ತದೆ. ಇದಕ್ಕೆ ಸುಣ್ಣಬಣ್ಣ ಬಳಿದಿರುವುದು ಯಾವ ಕಾಲಕ್ಕೋ.
ಕೊಂಕಣಿ ಲೇಖಕ ಮಹಾಬಳೇಶ್ವರ ಸೈಲ್‌ ಅವರ ಕಾದಂಬರಿಯನ್ನು ಡಾ. ಗೀತಾ ಶೆಣೈ “ಅದೃಷ್ಟ” ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಗಾಢ ವಿಷಾದದ ನೆರಳಿನಂತಿರುವ ‘…. ಮಳೆಹನಿ’

ಪ್ರಕೃತಿ ಬದುಕು ಮತ್ತು ಕಾವ್ಯದ ನಡುವಿನ ಸಾವಯವ ಸಂಬಂಧದ ತಾತ್ವಿಕ ಜಿಜ್ಞಾಸೆ ಸಂಕಲನದುದ್ದಕ್ಕೂ ಕಾಣುತ್ತದೆ. ಕೆಲವೆಡೆ ಸರಳವೆನಿಸುವ ವಸ್ತು ಮತ್ತು ತಂತ್ರಗಳಿಂದ ಹುಟ್ಟುವ ಪ್ರತಿಮೆಗಳಲ್ಲಿ ಸಂಕೀರ್ಣವಾದ ವಿಷಯಗಳನ್ನು ದಾಟಿಸುವ ಶಕ್ತಿ ಇಲ್ಲಿಯ ಕವನಗಳಲ್ಲಿದೆ ಎನಿಸುತ್ತದೆ. ಭಾಷೆಯೆಂಬುದು ಪ್ರಾಣಘಾತುಕವೆಂಬ ಎಚ್ಚರ ಇಲ್ಲಿಯ ಕವಿತೆಗಳಲ್ಲಿ ಎದ್ದುಕಾಣುತ್ತದೆ. ಇದು ಭಾಷೆಗೆ ಒಂದು ಬಿಗುವು ತಂದಿದೆ.
ಕವಿ ಕಾಜೂರು ಸತೀಶ್ ರವರ “ಕಣ್ಣಲ್ಲಿಳಿದ ಮಳೆಹನಿ” ಕವನ ಸಂಕಲನದ ಕುರಿತು ಡಾ. ಸಿ. ಬಿ. ಐನಳ್ಳಿ ಬರಹ

Read More

ನೆಲವ ಬಿಟ್ಟು ನೀರ ಮೇಲೆ ಇಪ್ಪತ್ತು ದಿನಗಳು

ಬೇಗುವಳ್ಳಿ ಮನೆಯಿಂದ ಹೊರಡುವ ಮೊದಲ ದಿನ ರಾತ್ರಿ ನಾವು ಮನೆಯ ಹೊರಗಿನ ವೆರಾಂಡದಲ್ಲಿಯೇ ಮಲಗಿದ್ದೆವು. ಮನೆ ಬಿಡಲು ಬೆಳಿಗ್ಗೆ ಬೇಗನೆ ಮುಹೂರ್ತವಿತ್ತು, ಅದಕ್ಕಾಗಿ ರಾತ್ರಿಯೇ ಮನೆಯಿಂದ ಹೊರಗೆ ಇರುವಂತೆ ವ್ಯವಸ್ಥೆ ಮಾಡಿದ್ದರೆಂದು ನನಗೆ ನೆನಪು. ಇಂಥ ಸಂದರ್ಭದಲ್ಲಿ ಮನೆಯವರಿಗೆ ಬೇಸರ ಮಾಡುವುದು ಬೇಡವೆಂದು ಅನಂತಮೂರ್ತಿ ಇದನ್ನು ಮೌನವಾಗಿ ಒಪ್ಪಿದ್ದರು.
ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ