Advertisement

Category: ದಿನದ ಪುಸ್ತಕ

ದಿಟ್ಟ ಮಹಿಳೆಯರ ಹೋರಾಟದ ಪ್ರತಿಮೆ

ಮಹಿಳೆಯರ ಜೀವನದಲ್ಲಿ ಎರಡು ವಿಷಯಗಳು ಸತ್ಯ. ಅದೆಂದರೆ, ಹರಿವ ನದಿಯಂತೆ ಬದುಕುವುದು ಹಾಗೂ ಪುರುಷನಿಗಿಂತ ಹೆಚ್ಚು ಧೈರ್ಯವಾಗಿ ಬದುಕನ್ನು ಎದುರಿಸುವುದು. ಹುಟ್ಟಿದ ಮನೆಯನ್ನೇ ಬಿಟ್ಟು ಬರುವ ಮಹಿಳೆಯರಿಗೆ ಮತ್ತೊಂದು ಊರನ್ನು ಬಿಡುವುದು, ಬೇರೊಂದು ಊರಿನಲ್ಲಿ ನೆಲೆ ನಿಲ್ಲುವುದು ಹೆಚ್ಚು ಕಷ್ಟವಾಗುವುದಿಲ್ಲವೇನೋ. ಹೀಗಾಗಿಯೇ ಅವರು ಅಕ್ಷರಶಃ ಹರಿವ ನದಿಯಾಗುತ್ತಾರೆ. ‘ಹರಿವ ನದಿ’ ಕೃತಿಯು ಮೇಲ್ನೋಟಕ್ಕೆ ಮೀನಾಕ್ಷಿ ಭಟ್ಟರ ಕಥನ ಎನಿಸಿದರೂ, ಇದು ದಿಟ್ಟ ಮಹಿಳೆಯರ ಹೋರಾಟದ ಪ್ರತಿಮೆಯಂತೆ ನಿಲ್ಲುತ್ತದೆ. ತಾವು ಓದಿದ ಕೃತಿಯ ಕುರಿತು ಸುಮನಾ ಲಕ್ಷ್ಮೀಶ್ ಬರೆದ ಬರಹ  ಇಲ್ಲಿದೆ. 

Read More

’ಇಂಗ್ಲಿಷ್ ಸರ್ ಎಷ್ಟು ಹ್ಯಾಂಡ್‌ಸಮ್ ಆಗಿದಾರೆ ನೋಡೆ!’

ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯಲ್ಲಿ ಎಸ್ತರ್ ಅವರು ತಮ್ಮ ಬದುಕಿನ  ಏಳುಬೀಳುಗಳನ್ನು ಬಹಳ ನಿರ್ಲಿಪ್ತವಾಗಿ ಬರೆದಿದ್ದಾರೆ. ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಪುಸ್ತಕದಲ್ಲಿ ‘ತಾವು ಕೂಡ  ಎಲ್ಲರಂತೆ ಒಬ್ಬ ಗೃಹಿಣಿ’ ಎಂದು ಹೇಳಿಕಂಡರೂ, ಅವರು ಸಾಮಾಜಿಕವಾಗಿಯೂ ಅನೇಕ ಸವಾಲುಗಳನ್ನು ಎದುರಿಸಿದವರು. ಸಾಂಸಾರಿಕವಾಗಿಯೂ ಸಂದಿಗ್ಧ ಸನ್ನಿವೇಶಗಳನ್ನು ದಾಟಿ ಬಂದವರು. ನವಿರು ನಿರೂಪಣೆಯಲ್ಲಿ ಮೂಡಿ ಬಂದ ಈ ಕೃತಿಯ ಕೆಲವು ಪುಟಗಳು ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿವೆ. ಮೊದಲ ಅಧ್ಯಾಯ ಇಲ್ಲಿದೆ. 

Read More

ಮಲ್ಲಪ್ಪ ಫ ಕರೇಣ್ಣನವರ ಪುಸ್ತಕದ ಕುರಿತು ಪ.ನಾ.ಹಳ್ಳಿ. ಹರೀಶ್ ಕುಮಾರ್ ಬರಹ

ಸದಾಕಾಲ ಹೆತ್ತಮ್ಮನ ಸೆರಗಿಡಿದು ಓಡಾಡುತ್ತಿದ್ದ ಲೇಖಕನಿಗೆ ತನ್ನ ಆತ್ಮವಿಶ್ವಾಸ ಹೆಚ್ಚಿಸಿ ಧೈರ್ಯ ತುಂಬಿದ ಮೊದಲ ಕಿರುಪ್ರವಾಸದ ನೆನಪಿನಿಂದ ಪ್ರಾರಂಭವಾಗಿ, ಕ್ರಿಕೆಟ್ ಹುಚ್ಚನ್ನು ಹತ್ತಿಸಿಕೊಂಡು ಸುಲಭಕ್ಕೆ ಸಿಗುವ ತೆಂಗಿನ ಮಟ್ಟಿಯನ್ನೇ ಸಚಿನ್ನನ ಎಂ ಆರ್ ಎಫ್ ಬ್ಯಾಟಾಗಿಸಿಕೊಂಡದ್ದು, ಕ್ರೀಡಾಕೂಟವನ್ನು ಆಯೋಜಿಸಿ ಸಂಗ್ರಹಿಸಿದ್ದ ಬಹುಮಾನದ ಹಣದೊಂದಿಗೆ ಗೆಳೆಯರು ಪರಾರಿಯಾದಾಗ ಬಹುಮಾನಿತ ತಂಡಕ್ಕೆ ಕೂಡಿಟ್ಟಿದ್ದ ಸಗಣಿಯನ್ನೇ ಹರಾಜು ಹಾಕಿ ಹಣ ಹೊಂದಿಸಿ ಊರಿನ ಮರ್ಯಾದೆ ಕಾಪಾಡಿಕೊಂಡಿದ್ದು… ಸೈಕಲ್ ತುಳಿಯುವ ಆಸೆಯಿಂದ ತುಳಿಯಲು ಸೈಕಲ್ ಕೊಡಲು ನಿರಾಕರಿಸಿದ ಸ್ನೇಹಿತನ ಸೈಕಲ್ಲನ್ನು ಕಿಡ್ನಾಪ್ ಮಾಡಿದ ಪ್ರಸಂಗಗಳು ಓದುಗರಲ್ಲಿ ಮಂದಹಾಸವನ್ನು ಮೂಡಿಸುತ್ತವೆ.
ಮಲ್ಲಪ್ಪ ಫ ಕರೇಣ್ಣನವರ “ನಮ್ಮೂರ ಅಗಸ್ಯಾಗ” ಕೃತಿಯ ಕುರಿತು ಪ.ನಾ.ಹಳ್ಳಿ. ಹರೀಶ್ ಕುಮಾರ್ ಬರಹ

Read More

ಕಳ್ಳಿಗಾಡಿನ ಇತಿಹಾಸ: ಕರಾಳ ವಾಸ್ತವದ ಜೀವಂತ ಚಿತ್ರಣ

‘ಕಳ್ಳಿಗಾಡಿನ ಇತಿಹಾಸ’ ಎಂಬ ಶೀರ್ಷಿಕೆಯಿದ್ದರೂ, ಇದು ಪ್ರಪಂಚದ ಯಾವುದೇ ಅಭಿವೃದ್ಧಿ ಹೊಂದದ ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಡೆಯುವ ಶೋಷಿತ ಸಮುದಾಯದ ಇತಿಹಾಸವೇ ಆಗಿದೆ. ಯಾವುದೇ ರಾಜಕೀಯ ವ್ಯವಸ್ಥೆಯಾದರೂ ಶೋಷಿತವರ್ಗದ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳದೇ ಹೋದಾಗ, ಆ ಜನರು ಅನುಭವಿಸುವ ಕಷ್ಟಕಾರ್ಪಣ್ಯಗಳನ್ನು ಹೇಳತೀರದು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆದಂಥ ಇಂಥ ಅನೇಕ ಕಥೆಗಳು ಕರ್ನಾಟಕದ ಮಣ್ಣಿನಲ್ಲೂ ದಾಖಲಾಗಿರುತ್ತವೆ. 
ತಮಿಳಿನ ವೈರಮುತ್ತು ಬರೆದಿರುವ “ಕಳ್ಳಿಕಾಟ್ಟು ಇತಿಹಾಸಂ” ಕಾದಂಬರಿಯನ್ನು ಡಾ. ಮಲರ್‌ವಿಳಿ ‘ಕಳ್ಳಿಗಾಡಿನ ಇತಿಹಾಸ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು, ಈ ಕೃತಿಯ ಕುರಿತು ಕೆ. ಪ್ರಭಾಕರನ್ ಬರಹ

Read More

ನೀಲಕುರಿಂಜಿ: ಹೊಸ ಅಸ್ಮಿತೆಗಳ ಆತ್ಮ ನಿವೇದನೆ

ಧರ್ಮಗಳಲ್ಲಿ ಸಣ್ಣತನ ಮತ್ತು ಮನುಷ್ಯ ಧರ್ಮದೊಳಗಿನ ದೊಡ್ಡತನಗಳ ಸಣ್ಣ ಗೆರೆಯನ್ನು ಮುಗ್ಧ ಮಗುವಿನ ಹಾಗೆ ನೋಡುವಂತೆ ಮಾಡುವ ಇಮ್ರಾನ್ ಎಂಬ ಕೂಸು, ‘ಪ್ರೀತಿಯಿಂದ ಗೆಲ್ಲಬಹುದು’ ಎಂಬುದನ್ನು ಕಲಿಸಿಕೊಡುವ ಗೆಳತಿಯ ಸ್ಟೇಟಸ್ ಪಾಠವು, ‘ಬಾಯಾರಿಕೆ ಆದಾಗ ನೀರು ಕುಡಿಯೋದು ತಪ್ಪಾ?’ ಎಂದು ಸ್ತ್ರೀಯ ಲೈಂಗಿಕ ಸ್ವಾತಂತ್ರ್ಯದ ಹಕ್ಕನ್ನು ಕೇಳುವ ಅಜ್ಜಿಯೂ, ಸಂಬಂಧಗಳ ಸಂಕೋಲೆಯಲ್ಲಿ ಸತ್ತು ಬದುಕುವ ಮತ್ತು ಬದುಕಿಯೂ ಸಾಯುವ ‘ಕೊನೆಯ ಮಳೆ’ ಯ ಹನಿಯೂ ಮನುಷ್ಯನ ಒದ್ದಾಟಗಳ ಯಥಾವತ್ತಾಗಿ ಅನುವಾದ ಮಾಡಿದ ಹಾಗಿವೆ.
ದಾದಾಪೀರ್‌ ಜೈಮನ್‌ ಅವರ “ನೀಲಕುರಿಂಜಿ” ಕಥಾಸಂಕಲನದ ಕುರಿತು ಚಾಂದ್ ಪಾಷ ಎನ್. ಎಸ್. ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ