Advertisement

Category: ದಿನದ ಪುಸ್ತಕ

ಹೋರಾಟದ ಬದುಕಿನ ಹೆಜ್ಜೆ ಗುರುತುಗಳು…

ಗೌಡನ ಮಗ ಮನೆಗೆ ಬಂದು ‘ಬೆಲ್ಲ ಮಾಡಿದ್ದ ದುಡ್ಡು ಕೊಡ್ರಿ, ಇಲ್ಲಂದ್ರ ಅದರ ಬದಲಿಗಿ ಈ ಆಕಳ ಮತ್ತು ಕರಾ ಎಳಕೊಂಡು ಹೋಗ್ತಿನಿ’. ಎಂದೇಳುವ ಮಾತುಗಳಲ್ಲಿ ಜಮೀನ್ದಾರಿಕೆಯ ದರ್ಪದದೊಟ್ಟಿಗೆ ಜಾತಿ ಪ್ರತಿಷ್ಠೆ ಅಹಂಕಾರ ವ್ಯಕ್ತಗೊಂಡಿರುವುದನ್ನು ನೋಡಬಹುದು. ಬಲಿಷ್ಟರಲ್ಲದ ದಲಿತರು ಅನಿವಾರ್ಯವಾಗಿ ಶೋಷಣೆಗೆ ಒಳಗಾಗುತ್ತಾರೆ. ತಮ್ಮ ದುಡಿಮೆಯ ಫಲವನ್ನು ಕೂಡ ದಕ್ಕಿಸಿಕೊಳ್ಳದ ಸ್ಥಿತಿಯಲ್ಲಿ ಅಸ್ಪೃಶ್ಯ ಸಮುದಾಯ ಇದೆ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಮಾನವೀಯ ಸಂಗತಿಗಳನ್ನು ಕಾಲಾನುಕಾಲಕ್ಕೆ ಪೋಷಿಸುವ ಸಾಂಪ್ರದಾಯಿಕ ಮನಸ್ಥಿತಿಯ ಬಗೆಗೆ ಈ ಕೃತಿಯಲ್ಲಿ ಅನೇಕ ನಿದರ್ಶನಗಳಿವೆ.
ಎಚ್‌.ಟಿ. ಪೋತೆ ಬರೆದ “ಬಯಲೆಂಬೊ ಬಯಲು” ಬಯೋಪಿಕ್‌ ಕಾದಂಬರಿಯ ಕುರಿತು ಪಿ. ನಂದಕುಮಾರ್‌ ಬರಹ

Read More

ಮ.ಸು. ಕೃಷ್ಣಮೂರ್ತಿ ಅನುವಾದಿಸಿದ “ಅನಾಮದಾಸನ ಕಡತ” ಕಾದಂಬರಿಯ ಒಂದು ಅಧ್ಯಾಯ

ಅನಾಮದಾಸ ತುಂಬ ಹಿಂದಿನಿಂದ ಬರೆಯುತ್ತಾ ಬಂದಿದ್ದಾನೆ. ಆತನ ಕಡತದ ಒಂದು ಮನೋರಂಜಕ ಅಂಶ ರೈಕ್ವ ಆಖ್ಯಾನ. ಸುಮಾರು ನಲವತ್ತು ವರ್ಷಗಳ ಹಿಂದೆ ಆತ ಛಾಂದೋಗ್ಯ ಉಪನಿಷತ್ತಿನ ರೈಕ್ವ ಆಖ್ಯಾನದ ಮೇಲೆ ಒಂದು ಕಥೆ ಬರೆದಿದ್ದ. ಅದರ ಶೀರ್ಷಿಕೆ – ‘ಎಲ್ಲವೂ ಗಾಳಿ’ ಎಂದು. ಅದು ಎಲ್ಲೂ ಬೆಳಕು ಕಾಣಲಿಲ್ಲ. ಆತ ಕಥೆಯನ್ನು ತುಂಬ ಲಘು ಮನೋಭಾವದಿಂದ ಬರೆದಿದ್ದ. ಈಗ ಅದರ ಮತ್ತೊಂದು ರೂಪ ಅವನಿಗೆ ದೊರೆತಿದೆ. ತಾನು ಲಘುವಾದೆನಲ್ಲ ಎಂದು ಆತನಿಗೆ ಖೇದ. ಅದರ ಕೊನೆಗೆ ಆತ ಕೆಲವು ಹೊಸ ಪಂಕ್ತಿಗಳನ್ನು ಸೇರಿಸಿದನೆಂದು ಕಾಣುತ್ತದೆ.
ಡಾ. ಹಜಾರೀಪ್ರಸಾದ ದ್ವಿವೇದಿ ರಚಿಸಿರುವ “ಅನಾಮದಾಸನ ಕಡತ” ಕಾದಂಬರಿಯಯನ್ನು ಮ.ಸು. ಕೃಷ್ಣಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದು ಅದರ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಸ್ವಾನುಭವದ ಸುಂದರ ಹೆಣಿಗೆ

ಕಾವ್ಯವನ್ನು ಸ್ಮಿತಾ ಭಾವಾಭಿವ್ಯಕ್ತಿಗೆ ಮಾಧ್ಯಮವಾಗಿ ಮಾತ್ರ ಬಳಸಿಕೊಂಡಿಲ್ಲ. ಬದುಕಿನ ಎಲ್ಲ ವಿಷಮತೆಗಳ ನಡುವೆಯೂ ಜೀವಚೈತನ್ಯದ ರಸವನ್ನಾಗಿ ಉಳಿಸಿಕೊಂಡಿದ್ದಾರೆ. ಇಲ್ಲಿಯ ಬಹುತೇಕ ಕವಿತೆಗಳು ಹೆಣ್ತನದ ಸೀಮಿತ ನೆಲೆಯಲ್ಲೇ ಮೂಡಿದೆ. ಜಗತ್ತಿನ ಅರ್ಧದಷ್ಟಿರುವ ಸ್ತ್ರೀ ಸಮೂಹದ ಅನುಭವಗಳಿಗೆ ಸೀಮಿತದ ಚೌಕಟ್ಟು ಹಾಕುವುದುಂಟು.  ಆದರೆ ಸ್ತ್ರೀ ಲೋಕ  ಈ ಎಲ್ಲ ಚೌಕಟ್ಟಿಗೂ ಮೀರಿ ಬೃಹತ್ ಆಲದ ಮರದಂತೆ ಬೀಳಲು ಬಿಟ್ಟು ತನ್ನೊಡಲೊಳಗೆ ಚಿಗುರುವ ಆಶ್ರಯ ಬಯಸುವ ಚೈತನ್ಯಗಳಿಗೆ ಆವಾಸವಾಗುತ್ತದೆ. ಸ್ಮಿತಾ ಅಮೃತರಾಜ್ ಅವರ ‘ಮಾತು ಮೀಟಿ ಹೋಗುವ ಹೊತ್ತು’ ಕವನ ಸಂಕಲನದ ಕುರಿತು ನಾಗರೇಖಾ ಗಾಂವಕರ ಬರಹ. 

Read More

“ಉಡದಾರ” ಪ್ರಬಂಧ ಸಂಕಲನದ ಒಂದು ಪ್ರಬಂಧ…

ಶನಿವಾರ ಬಂದರೆ ಸಾಕು ಚೌಕದ ಮೂಗು ಅರಳುತ್ತಿತ್ತು ಒಂದು ಕಾಲಕ್ಕೆ! ಮಸೀದಿಯ ಮೂಲೆಗೆ ಸುತ್ತಲಿನ ಹಳ್ಳಿಗಳಿಂದ ಬಂದ ಹೆಣ್ಮಕ್ಕಳು ಒಲೆ ಹೂಡಿ ತುಪ್ಪ ಕಾಯಿಸುತ್ತಿದ್ದರು. ಚೌಕದಿಂದಾಚೆ ಸುಮಾರು ದೂರದವರೆಗೆ ತುಪ್ಪದ ವಾಸನೆ ಗಮ್ಮಂತ ಬರುತ್ತಿತ್ತು. ಹದವಾಗಿ ಕಾಯುತ್ತಿದ್ದ ತುಪ್ಪಕ್ಕೆ ವೀಳ್ಯದೆಲೆ ಹಾಕಿ ತುಪ್ಪದ ವಾಸನೆಗೊಂದು ಅಪ್ಯಾಯತೆ ತರುತ್ತಿದ್ದರು. ಘಮ ಘಮಿಸುವ ತುಪ್ಪ ಕಾಯಿಸಿದ ಸ್ವಲ್ಪ ಹೊತ್ತಿಗೆ ಖಾಲಿಯಾಗುತ್ತಿತ್ತು. ತುಪ್ಪ ಮಾರುವವರಿಗೆ ಚೌಕ ಖಾಯಂ ವಿಳಾಸವಾಗಿತ್ತು.
ಶರಣಬಸವ ಕೆ. ಗುಡದಿನ್ನಿ ಬರೆದ ಹೊಸ ಪ್ರಬಂಧಗಳ ಸಂಕಲನ “ಉಡದಾರ” ಪುಸ್ತಕದಿಂದ ಒಂದು ಪ್ರಬಂಧ ನಿಮ್ಮ ಓದಿಗೆ

Read More

‘ಮೋಡದೊಡನೆ ಮಾತುಕತೆ’ಯ ಒಂದೆರಡು ಪುಟಗಳು

‘ಒಂದು ನಾಡಿನ ಸಂಕಥನಗಳನ್ನು ತಳಮಟ್ಟ ವಿಶ್ಲೇಷಿಸುತ್ತ ಆ ನಾಡಿನ ಮನಸ್ಸನ್ನು ತಿಳಿಯಬೇಕೆಂದೂ, ಹಾಗೂ ಆ ಮೂಲಕ ಆ ಭೂಭಾಗವನ್ನು ಆಕ್ರಮಿಸಿ ಆಳುವ ಸಾಮರ್ಥ್ಯ ಪಡೆಯಬೇಕೆಂದೂ ಬಯಸುವ ಜಾಗತಿಕ ಮಹತ್ತ್ವಾಕಾಂಕ್ಷೆಯ ಕಾಲದಲ್ಲಿ ನಾವಿದ್ದೇವೆ. ತತ್ಫಲವಾಗಿ ಈಗ ಬಾಳುವ ದಾರಿಗಳನ್ನೆಲ್ಲ ಆಳುವ ಮಾರ್ಗಗಳನ್ನಾಗಿ ಮಾರ್ಪಡಿಸುವ ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಳ್ಳುತ್ತಿದೆ; ಈ ಸನ್ನಿವೇಶದೊಳಗೆ ಸಾಹಿತ್ಯ-ಕಲೆಗಳೂ ಅಂಥ ಆಳುವ ಸಾಧನಗಳಾಗಿ ರೂಪಾಂತರಗೊಳ್ಳುತ್ತಿರುವವೋ ಎಂಬ ಸಂಶಯ ಮೂಡುತ್ತದೆ’ ಎಂಬ ಮಾತುಗಳನ್ನು ಲೇಖಕ ಕೆ.ವಿ. ಅಕ್ಷರ ಅವರು ‘ಮೋಡದೊಡನೆ ಮಾತುಕತೆ’ ಎಂಬ ತಮ್ಮ ಹೊಸ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಆ ಕೃತಿಯ ಒಂದು ಅಧ್ಯಾಯ ಇಲ್ಲಿದೆ. 

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ