Advertisement

Category: ದಿನದ ಪುಸ್ತಕ

‘ಚಾಲುಕ್ಯರ ಶಿಲ್ಪಕಲೆ’ಯೆಂಬ ಮಹಾನ್ ವೃಕ್ಷದ ಸುತ್ತ

ಬಾದಾಮಿ ಐಹೊಳೆಗಳ ಗುಹೆಗಳನ್ನು ಕಡೆಯುವ ವೇಳೆಗಾಗಲೇ ಆ ರೂವಾರಿಗಳಿಗೆ ಸುಮಾರು 800 ವರ್ಷಗಳ ಪರಂಪರೆಯ ಹಿನ್ನೆಲೆ ಇದ್ದಿತು. ಕಲ್ಪನೆ ಮತ್ತು ರೂಪಿಸುವ ಕುಶಲತೆಯೂ ಬೆಳೆಯಿತು: ಒಳ ಮತ್ತು ಹೊರ ಭಿತ್ತಿಗಳ ಅಲಂಕರಣವು ಸೇರ್ಪಡೆಗೊಂಡಿತು. ಚಾಲುಕ್ಯರ ರೂವಾರಿಗಳು ತಮ್ಮ ಪೂರ್ವಸೂರಿಗಳ ವಾರಸುದಾರರಂತೆ ತಮ್ಮ ಕರಕುಶಲತೆಯನ್ನು ಮೆರೆದರು. ಪರಂಪರೆಗೆ ಋಣಿಗಳಾಗಿಯೂ ತಮ್ಮದೇ ಆದ ಅನುಭವ, ಸ್ಥಳೀಯ ಪರಿಕರ, ಮಾಧ್ಯಮಗಳಿಂದ ಅನನ್ಯ ದೃಶ್ಯ ಲೋಕವನ್ನೇ ಸೃಷ್ಟಿಸಿದರು.
ಚಿತ್ರಕಲಾವಿದ ಪುಂಡಲೀಕ ಕಲ್ಲಿಗನೂರು ಅವರ “ಚಾಲುಕ್ಯರ ಶಿಲ್ಪಕಲೆ” ಶಿಲ್ಪಕಲಾ ಪುಸ್ತಕಕ್ಕೆ ಕೆ.ವಿ. ಸುಬ್ರಹ್ಮಣ್ಯ ಬರೆದ ಮುನ್ನುಡಿ

Read More

ನದಿಯಂತೆ ಹರಿದವಳು: ಆತ್ಮಕತೆಯ ಒಂದೆರಡು ಪುಟಗಳು

ಶರಾವತಿ ನದಿಗೆ ಅಣೆಕಟ್ಟು ಕಟ್ಟುತ್ತಾರಂತೆ, ನಮ್ಮೂರು ಮುಳುಗುತ್ತದಂತೆ, ನಾಡಿಗೇ ಬೆಳಕು ದೊರೆಯಲಿದೆಯಂತೆ ಎಂಬೆಲ್ಲ ಸುದ್ದಿಗಳನ್ನು ಕೇಳುವಾಗ, ಮೀನಾಕ್ಷಿಯವರಿಗಿನ್ನೂ ಸಣ್ಣ ಹರೆಯ. ಈ ಎಲ್ಲ ಹೇಳಿಕೆಗಳ ನಡುವೆ ಒಂದಕ್ಕೊಂದು ಸಂಬಂಧವಿಲ್ಲ ಎಂದೆನಿಸುತ್ತಿತ್ತು.  ಆದರೆ ಹುಟ್ಟಿದೂರು ತೊರೆಯಲೇಬೇಕಾಯಿತು. ಮುಂದಕ್ಕೆ ಎಷ್ಟೊಂದು ಊರುಗಳಲ್ಲಿ, ಕಷ್ಟಗಳ ಮೆಟ್ಟಿಲೇರಿ ಬದುಕನ್ನು ಕಟ್ಟಿಕೊಳ್ಳಬೇಕಾಯಿತು ಎಂಬುದೇ ‘ಹರಿವ ನದಿ’ಯಲ್ಲಿರುವ ಜೀವನಗಾಥೆ. ಅಮ್ಮ ಮೀನಾಕ್ಷಿ ಭಟ್ಟರ ಜೀವನದಲ್ಲಿ ಎದುರಾದ ಸವಾಲುಗಳು ಮಗಳು ಭಾರತಿ ಹೆಗಡೆಗೆ ಇಂದಿಗೂ ಸ್ಫೂರ್ತಿ. ಲೇಖಕಿಯೂ ಆಗಿರುವ ಅವರು ಅಮ್ಮನ ದನಿಗೆ ಅಕ್ಷರ ರೂಪ ನೀಡಿದ್ದಾರೆ. ಈ ಆತ್ಮಕತೆಯ ಒಂದು  ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿದೆ.

Read More

ಯೋಗೀಂದ್ರ ಮರವಂತೆ ಪ್ರಬಂಧ ಸಂಕಲನಕ್ಕೆ ಎಸ್.ದಿವಾಕರ್ ಬರೆದ ಮುನ್ನುಡಿ

ಯೋಗೀಂದ್ರರ ಬರವಣಿಗೆಗಿರುವ ಒಂದು ವಿಶೇಷ ಗುಣವೆಂದರೆ ಅದರ ಇಂದ್ರಿಯಗಮ್ಯತೆ. ಸೃಜನಶೀಲವಾದ ಎಲ್ಲ ಉತ್ತಮ ಬರವಣಿಗೆಯಲ್ಲೂ ಓದುಗರ ಇಂದ್ರಿಯಗಳ ಮೂಲಕವೇ ಅವರನ್ನು ತಟ್ಟಿ ಪ್ರಚೋದಿಸುವ, ಹಾಗೆ ಪ್ರಚೋದಿಸುವ ಮೂಲಕವೇ ಅವರಿಗೆ ಅನುಭವವೊಂದನ್ನು ನಿಜಗೊಳಿಸಿಕೊಡುವ ಹಂಬಲವಿರುತ್ತದೆ. ಯೋಗೀಂದ್ರರ ಬರವಣಿಗೆ ಈ ಬಗೆಯದು.  ಈ ಪುಸ್ತಕದ ಶೀರ್ಷಿಕೆಯಾಗಿರುವ ‘ಮುರಿದ ಸೈಕಲ್ ಮತ್ತು ಹುಲಾಹೂಪ್ ಹುಡುಗಿ’ ನನ್ನ ದೃಷ್ಟಿಯಲ್ಲಿ ಒಂದು ಅತ್ಯುತ್ತಮ ಪ್ರಬಂಧ. -ಯೋಗೀಂದ್ರ ಮರವಂತೆ ಅವರ ‘ಮುರಿದ ಸೈಕಲ್, ಹುಲಾಹೂಪ್ ಹುಡುಗಿ’ ಎಂಬ ಕೃತಿಗೆ ಹಿರಿಯ ಲೇಖಕ ಎಸ್. ದಿವಾಕರ್ ಬರೆದ ಮುನ್ನುಡಿ ಇಲ್ಲಿದೆ.

Read More

‘ಏನು ಜನ, ಎಂಥ ಗಾನ’ ಪುಸ್ತಕದ ಕುರಿತು ಶ್ರೀಮತಿ ದೇವಿ ಬರಹ

ಸಂಗೀತದಲ್ಲಿ ವ್ಯಕ್ತಿಗಳ ಬಗ್ಗೆ ಬರೆಯುವ ಪ್ರಸಂಗ ಬಂದಾಗೆಲ್ಲಾ ಅದು ಆತನ ಸಂಗೀತ-ಸಾಧನೆಯನ್ನು ಹೊಗಳುವುದಕ್ಕಷ್ಟೇ ಸೀಮಿತವಾಗುವ ಅಪಾಯ ಎದುರಾಗುತ್ತದೆ. ಆದರೆ ‘ಏನು ಜನ, ಎಂಥ ಗಾನ’ ಪುಸ್ತಕವೂ ಸಂಗೀತ ಮತ್ತು ಸಂಗೀತಗಾರರ ಕುರಿತೇ ಆಗಿದ್ದರೂ ಈ ಅಪಾಯಕ್ಕೆ ಎಲ್ಲಿಯೂ ಈಡಾಗಿಲ್ಲ. ಇಲ್ಲಿ ಹೇಳಲ್ಪಡುವ ಘಟನೆಗಳೇ ಅಲ್ಲಿನ ‘ವಸ್ತು ಮತ್ತು ವ್ಯಕ್ತಿ’ಯ ಹಿರಿತನವನ್ನು, ಸರಳತೆಯನ್ನು, ಸಂಗೀತ ಅವರನ್ನು ಆವರಿಸಿಕೊಂಡ ಪರಿಯನ್ನು, ಅವರ ಜೀವನ ಪ್ರೀತಿಯನ್ನು ಮನಸ್ಸಿನಾಳಕ್ಕೆ ಇಳಿಸಿ ಬಿಡುತ್ತವೆ.
ಅರವಿಂದ ಗಜೇಂದ್ರಗಡಕರ್ ಅವರ ಮರಾಠಿ ಕೃತಿಯನ್ನು ದಮಯಂತಿ ನರೇಗಲ್ಲ “ಏನು ಜನ ಎಂಥಾ ಗಾನ” ಶೀರ್ಷಿಕೆಯಡಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದು ಅದರ ಕುರಿತು ಶ್ರೀಮತಿ ದೇವಿ ಬರೆದಿದ್ದಾರೆ

Read More

ಮುಗ್ಧತೆಯಿಂದ ಪ್ರಬುದ್ಧತೆಯ ಕಡೆಗಿನ ಪಯಣದ ಕತೆಗಳು

ಇಂತಹ ಕಥನಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾದುದು. ಸ್ವಲ್ಪ ಎಡವಟ್ಟಾದರೆ ಕತೆ ಹೋಗಿ ಪ್ರಬಂಧವಾಗಿ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಆದರೆ ಅನಿಲ್ ಗುನ್ನಾಪೂರ ತಮ್ಮ ಮೊದಲ ಕಥಾ ಸಂಕಲನದಲ್ಲಿ ಇಂಥದ್ದೊಂದು ಅಪಾಯಕಾರಿ ಪ್ರಯೋಗ ಮಾಡಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇಲ್ಲಿನ ಕತೆಯ ನಿರೂಪಕನೊಂದಿಗೆ ತಮ್ಮನ್ನು ಸಮೀಕರಿಸಿಕೊಂಡಂತಿರುವ ಲೇಖಕನ ಕುತೂಹಲ, ಅವನ ಗೆಳೆಯ ಗೌತಮನ ದಿಟ್ಟತನ ಹಾಗೂ ಮುದುಕಿಯ ಅಂತಃಕರಣ ಈ ಮೂರರ ಹದವಾದ ಮಿಶ್ರಣ ಕತೆಗೆ ಒಂದು ತೆರನಾದ ನಯಗಾರಿಕೆಯನ್ನು ತಂದುಕೊಟ್ಟಿವೆ.
ಅನಿಲ್‌ ಗುನ್ನಾಪೂರ ಬರೆದ ‘ಕಲ್ಲು ಹೂವಿನ ನೆರಳು’ ಹೊಸ ಕಥಾಸಂಕಲನಕ್ಕೆ ಚನ್ನಪ್ಪ ಕಟ್ಟಿ ಬರೆದ ಮಾತುಗಳು

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ