Advertisement

Category: ದಿನದ ಪುಸ್ತಕ

ಬದುಕಿನ ಪಥದಲ್ಲಿ ಮೂಡಿದ ನೆನಪಿನ ಪ್ರಬಂಧ

ಆ ಕಾಲದ ಓದುವ ವರ್ಣನೆ ಚನ್ನಾಗಿ ಮೂಡಿಬಂದಿದೆ. ಶಾಲೆ ಕಾಲೇಜಿಗೆ ನಡೆದುಕೊಂಡು ಹೋಗುತ್ತಲೇ ಶರಾವತಿ ದಾಟುವ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡರೂ ಸಂಗೀತವನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಕಲಿತದ್ದು ನೋಡಿದರೆ ಸಂಗೀತದ ಮೇಲೆ ಇವರಿಗಿದ್ದ ಆಸಕ್ತಿಯ ಅರಿವಾಗುತ್ತದೆ. ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಖ್ಯಾತ ಕವಿ ವೀಸಿ, ತಮ್ಮ ಶಿಕ್ಷಕರುಗಳು, ಆ ಕಾಲದ ಕಾಲೇಜಿನ ಬದುಕು ಎಲ್ಲವೂ ಒಂದು ನೆನಪಿನ ಸುರುಳಿಯಂತೆ ಪ್ರಬಂಧದೋಪಾದಿಯಲ್ಲಿ ಹರಿದು ಬಂದಿದೆ. ಅದರಲ್ಲಿಯೂ ಇವರ ಮದುವೆಯ ಸ್ವಾರಸ್ಯ ತಪ್ಪದೇ ಓದಬೇಕು.
ಜಿ. ಎಸ್. ಹೆಗಡೆ ಜೀವನಾಧಾರಿತ “ಜೀವನ ಪಥ ನೆನಪಿನ ರಥ” ಪುಸ್ತಕದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ

Read More

ಮಾತು ಮೀರಿದ ಕ್ರಿಯಾರೂಪ: ಬರಗೂರು ರಾಮಚಂದ್ರಪ್ಪ

ಪ್ರಜಾಸತ್ತಾತ್ಮಕ ಸಮಾಜವೊಂದರಲ್ಲಿ ನಡೆಯುತ್ತಿರುವ ಸ್ಥಿತ್ಯಂತರದ ಸಂಕಟಗಳನ್ನು, ಅಲ್ಲೀವರೆಗೆ ಅಜ್ಞಾತವಾಗಿದ್ದ ಸಮುದಾಯಗಳ ಬದುಕಿನ ಮೂಲಕ ಪರಿಶೀಲಿಸುವ ಪ್ರತಿಭಟನಾ ಪ್ರತೀಕಗಳನ್ನೂ ಕಾಣಬಹುದು. ಈ ಮಾದರಿಯ ರಚನೆಗಳಲ್ಲಿ ಚಲನಶೀಲತೆಯ ಒರತೆ ಉಕ್ಕುವುದುಂಟು. ಈ ಒರತೆಯನ್ನು ಕೃತಿಕಾರರು ತಂತಮ್ಮ ಬೊಗಸೆಯಲ್ಲಿ ಎಷ್ಟೆಷ್ಟು ಮತ್ತು ಹೇಗೆ ಹೇಗೆ ತುಂಬಿಕೊಳ್ಳುತ್ತಾರೆಂಬ ಆಧಾರದಲ್ಲಿ ಕೃತಿಯ ವಸ್ತು-ವಿನ್ಯಾಸಗಳು ಕಟ್ಟಿಕೊಳ್ಳುತ್ತವೆ. ಬದಲಾವಣೆಯ ಬೊಗಸೆಯನ್ನು ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ನೆಲೆ-ನಿಲುವುಗಳು ರೂಪುಗೊಳ್ಳುತ್ತವೆ; ಸಮಕಾಲೀನವಾಗುತ್ತವೆ.

Read More

ಎ.ಎನ್. ಪ್ರಸನ್ನ ಅವರ ಕಥನ ಕಲೆ ಮತ್ತು ಕಥಾ ಜಗತ್ತು

ಇಲ್ಲಿನ ಎಲ್ಲಾ ಕಥೆಗಳಲ್ಲಿ ಪಾತ್ರಗಳ ದಿನನಿತ್ಯದ ಬದುಕಿನ ಲಯಗಳನ್ನು ಸೂಕ್ತ ವಿವರಗಳ ಮೂಲಕ ನಿರೂಪಿಸಲಾಗಿದೆ. ಪ್ರಸನ್ನ ಅವರದೇ ಆದ ಒಂದು ನಿರೂಪಣಾ ವಿಶೇಷತೆ ಎಂದರೆ, ಅವರು ಪಾತ್ರಗಳನ್ನು ಸುತ್ತುವರಿದಿರುವ ಗಾಳಿ, ಬೆಳಕು ಮತ್ತು ಪೀಠೋಪಕರಣಗಳು ಹಾಗೂ ಇತರ ವಸ್ತುವಿಶೇಷಗಳ ಮೂಲಕವೂ ಪಾತ್ರಗಳ ಮಾನಸಿಕ ಏರುಪೇರುಗಳನ್ನು ಪ್ರತಿಫಲಿಸುವುದು. ಈ ಮಾತುಗಳಿಗೆ `ಹುಡುಕಾಟ’ ಕಥೆಯ ನಾಯಕಿ ಸುಕೃತಾಳ ಬಗೆಗೆ ದಿನದ ವಿವಿಧ ಹಂತಗಳಲ್ಲಿ, ವಿವಿಧ ಆವರಣಗಳಲ್ಲಿ ಅವಳ ವಿವಿಧ ಮಾನಸಿಕ ಸ್ಥಿತಿಗಳನ್ನು ಕಟ್ಟಿಕೊಟ್ಟಿರುವ ಈ ನಿರೂಪಣೆಗಳನ್ನು ಗಮನಿಸಬಹುದು.
ಎ.ಎನ್. ಪ್ರಸನ್ನ ಹೊಸ ಕಥಾ ಸಂಕಲನ ‘ಬಿಡುಗಡೆ’ಗೆ ಗಿರೀಶ್ ವಿ. ವಾಘ್ ಬರೆದ ಮುನ್ನುಡಿ ನಿಮ್ಮ ಓದಿಗೆ

Read More

ಅಮೀರ್ ಬಾಯಿ ಕರ್ನಾಟಕಿ: ಸ್ಫೂರ್ತಿದಾಯಕ ಕೃತಿ

ಮಹಿಳೆಯರಿಗೆ ಬಹುತೇಕ ನಿರಾಕರಿಸಲ್ಪಟ್ಟಿರುವ ಕಲಾಕ್ಷೇತ್ರದ ವಲಯಕ್ಕೆ ಅಮೀರಬಾಯಿಯಂಥ ಅಭಿನಯ ತಾರೆ ಪ್ರವೇಶ ಪಡೆದದ್ದು ಒಂದು ಪವಾಡವೇ ಸರಿ.  ಸಂಪ್ರದಾಯದ ಗೆರೆ ದಾಟಿ, ಅಮೀರ್ ಬಾಯಿ, ಪ್ರತಿಭೆಯನ್ನು ಪೋಷಿಸಲು ಮುಂದಾದರು. ಮುಂಬೈಯ ಎಚ್.ಎಂ.ವಿ ಕಂಪನಿಯು ಅಮೀರಬಾಯಿಯ ಪ್ರತಿಭೆಯನ್ನು ಗುರುತಿಸಿ ಧ್ವನಿ ಮುದ್ರಣಕ್ಕೆ ಕರೆಸಿಕೊಂಡಿತು. ಹದಿನಾರು ವರ್ಷದ ಅಮೀರಬಾಯಿ ಅಲ್ಲಿ ಕವ್ವಾಲಿಯೊಂದನ್ನು ಹಾಡಿದ್ದರು. ನಂತರ ಅವಕಾಶಗಳು ಇವರನ್ನು ಹುಡುಕುತ್ತಾ ಬಂದವು. ಪ್ರೊ. ರಹಮತ್ ತರೀಕೆರೆ ಬರೆದ ಅಮೀರ್ ಬಾಯಿ ಕರ್ನಾಟಕಿ ಕೃತಿಯ ಕುರಿತು ಡಾ. ಸುಮಂಗಲಾ ಮೇಟಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.

Read More

ಕಂಬಾರರಿಗೆ ಒದಗಿ ಬಂದ ಮತ್ತೊಂದು ಕತೆ ಚಾಂದಬೀ ಸರ್ಕಾರ

ದೇಶಪಾಂಡೆ ಅವರ ಮನೆಯಿಂದ ಖಾನ್ ಇದ್ದ ಸ್ಥಳಕ್ಕೆ ತಲುಪುವತನಕ ಚಾಂದಬೀ ಭೂಮಿಯ ಮೇಲೆ ಕಾಲೂರಲೇ ಇಲ್ಲ. ಕ್ಷಣಕ್ಕೊಮ್ಮೆ ಗರ್ಭವ ಮುಟ್ಟಿ ನೋಡಿಕೊಳ್ಳುತ್ತ ಪ್ರತಿಸಲವೂ ಹೊಸ ಹೊಸದಾಗಿ ಕೃಷ್ಣನ ತಾಯಿ ಯಶೋಧೆಯಾಗಿ ಕನಸು ಕಾಣತೊಡಗಿದಳು. ಖಾನನ ಬಳಿಗೆ ಹೋದೊಡನೆ ದೇಶಪಾಂಡೆ ದಂಪತಿಗಳ ಪ್ರೀತಿ, ಗೌರವಾದರಗಳನ್ನು ಹತ್ತು ಸಲ ಹೇಳಿದಳು. ಬಸಿರಾದ ವಿಷಯವನ್ನು ಹತ್ತು ಬಾರಿ ಹೇಳಿದಳು. ಪ್ರತಿಯೊಂದು ಸಲವೂ ಇದೇ ಮೊದಲನೇ ಸಲವೆಂಬಂತೆ ಪ್ರತಿಸಲವೂ ಹೊಸ ಹೊಸ ವಿವರಗಳೊಂದಿಗೆ ಹೇಳಿದಳು.
ಡಾ. ಚಂದ್ರಶೇಖರ ಕಂಬಾರರ ಹೊಸ ಕಾದಂಬರಿ ‘ಚಾಂದಬೀ ಸರ್ಕಾರ’ದ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ